Publish Date: Tue, 16 Jun 2026 (10:54 IST)
Updated Date: Tue, 16 Jun 2026 (11:00 IST)
ಕಾರಿಗೆ ಢಿಕ್ಕಿ ಹೊಡೆಯಿತೆಂದು ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದಾಗ ಆತ ಮಾಡಿದ ಕೆಲಸಕ್ಕೆ ಅಲ್ಲಿದ್ದವರೆಲ್ಲಾ ಪರಾರಿಯಾಗಿದ್ದಾರೆ.
ಸರ್ದಾರ್ ಜಿಗಳು ಎಂದರೆ ಧೈರ್ಯವಂತರು, ಸಾಹಸಿಗಳು ಎಂದೇ ಪರಿಗಣಿಸಲಾಗುತ್ತದೆ. ತಮ್ಮ ವಿರುದ್ಧ ಕೋಲು ಎತ್ತಿದರೆ ಕತ್ತಿ ತೋರಿಸುವ ಶೂರರು. ಆದರೆ ಇಲ್ಲಿ ರಸ್ತೆಯಲ್ಲಿ ಈ ಲಾರಿ ಚಾಲಕ ಸರ್ದಾರ್ ಜಿ ಮಾಡಿದ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನ ನಿಬಿಡ ರಸ್ತೆಯಲ್ಲಿ ಕಾರಿಗೆ ಲಾರಿ ಢಿಕ್ಕಿ ಹೊಡೆದಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಎರಡೂ ವಾಹನಗಳ ಚಾಲಕರ ನಡುವೆ ನಿನ್ನದೇ ತಪ್ಪು ಎಂದು ವಾಗ್ವಾದವಾಗುವುದು ಸಹಜ. ಆದರೆ ಇಲ್ಲಿ ಕಾರಿನ ಪರ ನಿಂತಿದ್ದ ಕೆಲವರ ಗುಂಪು ಲಾರಿಗೆ ದೊಣ್ಣೆ ಹಿಡಿದು ಹೊಡೆದು ಚಾಲಕನನ್ನು ಹೊರಗೆ ಬಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ಡ್ರೈವರ್ ಸೀಟ್ ನಿಂದ ಎದ್ದು ಬಂದ ಸರ್ದಾರ್ ಜಿ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಬೀಸುತ್ತಾ ಜನರತ್ತ ಬಂದಿದ್ದಾರೆ. ಆತನ ಕೈಯಲ್ಲಿ ಲಾಂಗ್ ನೋಡಿ ಅಲ್ಲಿ ದೊಣ್ಣೆ ಹಿಡಿದುಕೊಂಡು ನಿಂತಿದ್ದವರೆಲ್ಲಾ ಪರಾರಿಯಾಗಿದ್ದಾರೆ. ಸರ್ದಾರ್ ಜಿಯ ಕೃತ್ಯಕ್ಕೆ ಕೆಲವರು ನಕ್ಕರೆ ಮತ್ತೆ ಕೆಲವರು ಈ ರೀತಿ ನಡು ರಸ್ತೆಯಲ್ಲಿ ಲಾಂಗ್ ಹಿಡಿದು ಆಕ್ರಮಣ ಮಾಡಲು ಬರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ