Webdunia - Bharat's app for daily news and videos

Install App

ಕಳ್ಳರನ್ನು ಓಡಿಸಿ ಎಂದು ಭರ್ಜರಿ ಭಾಷಣ ಮಾಡಿದ ಲಾಲೂ ಯಾದವ್: ಹೇಳಲು ತಕ್ಕ ವ್ಯಕ್ತಿ ಎಂದ ಪಬ್ಲಿಕ್

Krishnaveni K
ಸೋಮವಾರ, 18 ಆಗಸ್ಟ್ 2025 (09:49 IST)
ನವದೆಹಲಿ: ಮತಗಳ್ಳತನದ ವಿರುದ್ಧ ಬಿಹಾರದಲ್ಲಿ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ ಲಾಲೂ ಪ್ರಸಾದ್ ಯಾದವ್ ಕಳ್ಳರನ್ನು ಓಡಿಸಿ ಎಂದಿದ್ದಾರೆ. ಅವರ ಭಾಷಣಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಈ ಮಾತು ಹೇಳಲು ಸರಿಯಾದ ವ್ಯಕ್ತಿ ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜೊತೆ ಬಿಹಾರದ ಮತ ಪರಿಷ್ಕರಣೆ ವಿರೋಧಿ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡ ಲಾಲೂ ಪ್ರಸಾದ್ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮತಗಳ್ಳರನ್ನು ಓಡಿಸಿ ಎಂದರು.

ಕಳ್ಳರನ್ನು ಓಡಿಸಿ, ಬಿಜೆಪಿಯನ್ನು ತೊಲಗಿಸಿ ಮತ್ತು ನಮ್ಮನ್ನು ಗೆಲ್ಲಿಸಿ ಎಂದರು. ನಾವೆಲ್ಲರೂ ಒಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಇದಕ್ಕಾಗಿ ವಿಪಕ್ಷಗಳೆಲ್ಲವೂ ಒಗ್ಗಟ್ಟಾಗಬೇಕು. ಪ್ರಜಾಪ್ರಭುತ್ವ ಉಳಿಸಲು ನಾವು ಒಂದಾಗಬೇಕು ಎಂದಿದ್ದಾರೆ.

ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಾಲೂ ಪ್ರಸಾದ್  ಯಾದವ್ ಮೇವು ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಮಾಡಿದ ಆರೋಪಕ್ಕೊಳಗಾದವರು. ಜೈಲು ಶಿಕ್ಷೆಗೂ ಒಳಗಾದವರು. ಈಗ ಅನಾರೋಗ್ಯದ ನೆಪದಲ್ಲಿ ಜಾಮೀನು ಪಡೆದು ಹೊರಗಿದ್ದಾರೆ.  ಅಂತಹವರು ಈಗ ಕಳ್ಳರನ್ನು ಓಡಿಸಿ ಎನ್ನುತ್ತಿರುವುದು ವಿಪರ್ಯಾಸವೇ ಸರಿ ಎಂದು ನೆಟ್ಟಿಗರು ಹೇಳಿದ್ದಾರೆ. ಹಾಗಿದ್ರೆ ನೀವ್ಯಾಕೆ ಜೈಲಿಗೆ ಹೋಗಿದ್ರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಳ್ಳರನ್ನು ಓಡಿಸಿ ಎಂದು ಭರ್ಜರಿ ಭಾಷಣ ಮಾಡಿದ ಲಾಲೂ ಯಾದವ್: ಹೇಳಲು ತಕ್ಕ ವ್ಯಕ್ತಿ ಎಂದ ಪಬ್ಲಿಕ್

ಮೋದಿ ದೊಡ್ಡ ಮತಗಳ್ಳ, ಅವರನ್ನು ಓಡಿಸಬೇಕು ಎಂದ ಮಲ್ಲಿಕಾರ್ಜುನ ಖರ್ಗೆ: ನೆಟ್ಟಿಗರ ಪ್ರತಿಕ್ರಿಯೆ ನೋಡಿ

ಹಣೆಗೆ ಕುಂಕುಮ, ನಾಮ: ಎನ್ ಡಿಎ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ನಿಜಕ್ಕೂ ಯಾರು

Karnataka Rains: ರಾಜ್ಯಾದ್ಯಂತ ಈ ದಿನದವರೆಗೂ ಇರಲಿದೆ ಭಾರೀ ಮಳೆ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಮುಂದಿನ ಸುದ್ದಿ
Show comments