Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ಲಡ್ಡು ದರ್ಬಾರ್

ಲಡ್ಡು

geetha

ತಿರುಪತಿ , ಶನಿವಾರ, 20 ಜನವರಿ 2024 (17:36 IST)
ತಿರುಪತಿ : ಬರೋಬ್ಬರಿ ಒಂದು ಲಕ್ಷ ಲಾಡು ಪ್ರಸಾದವನ್ನು ತಿರುಪತಿಯಿಂದ ಅಯೋಧ್ಯೆಗೆ ಕಳುಹಿಸಿ ಕೊಡಲಾಗಿದ್ದು, ಈಗಾಗಲೇ ಸಿದ್ದಗೊಂಡಿರುವ ತಾಜಾ ಲಾಡುಗಳನ್ನು ಟ್ರಕ್‌ ಗಳಲ್ಲಿ ರವಾನಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಭಕ್ತಾದಿಗಳಿಗೆ ವಿತರಿಸಲು ತಿರುಪತಿ ತಿರುಮಲ ದೇವಾಲಯ ಟ್ರಸ್ಟ್‌ ಈ ಕಾರ್ಯಕ್ಕೆ ಮುಂದಾಗಿದೆ.   
 
ಇದೇ ವೇಳೆ, ಹೈದರಾಬಾದ್‌ ಮೂಲದ ಬಿಜೆಪಿ ನಾಯಕರೊಬ್ಬರು ಅಯೋಧ್ಯೆಗೆ ಕಳುಹಿಸಿದ್ದ 1265 ಕೆಜಿ ತೂಕದ ಬೃಹತ್‌ ಲಡ್ಡು ಅಯೋಧ್ಯೆ ತಲುಪಿದೆ. ನಾಲ್ಕು ದಿನಗಳ ಹಿಂದಷ್ಟೇ ಜೈಶ್ರೀರಾಮ್‌ ಎಂಬ ಬರಹವುಳ್ಳ ಈ ಬೃಹತ್‌ ಲಡ್ಡುವನ್ನು ಅಯೋಧ್ಯೆಗೆ ಕಳಿಸಿದ್ದರು.

 ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನಾ ಕಾರ್ಯಕ್ಕೆ ಕೇವಲ 48 ತಾಸುಗಳಷ್ಟೇ ಉಳಿದಿವೆ. ಜ. 22 ರ ಸೋಮವಾರದಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಮುಹೂರ್ತಕ್ಕೆ ತಿರುಪತಿಯ ವೆಂಕಟೇಶ್ವರ ದೇಗುಲದಿಂದ ಲಾಡು ಪ್ರಸಾದವನ್ನು ಕಳುಹಿಸಿಕೊಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ರಾಮ ದ್ವೇಷಿ ಸರ್ಕಾರ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪ