Webdunia - Bharat's app for daily news and videos

Install App

Kumbhmela: ಕಳ್ಳತನ ಮಾಡಿ ಕುಂಭಮೇಳಕ್ಕೆ ಹೋಗಿ ಪಾಪ ಕಳೆಯಲು ಪ್ಲ್ಯಾನ್ ಮಾಡಿದ್ದ, ಕಳ್ಳನ ಸಂಚು ಫೇಲ್ ಆಗಿದ್ದು ಹೇಗೆ

Krishnaveni K
ಶುಕ್ರವಾರ, 24 ಜನವರಿ 2025 (09:38 IST)
ದೆಹಲಿ: ಕುಂಭಮೇಳಕ್ಕೆ ಹೋಗಿ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗಬೇಕು ಎಂದು ಎಷ್ಟೋ ಜನ ಗಂಗಾ ನದಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕುಂಭಮೇಳಕ್ಕೆ ಹೋಗಲೆಂದೇ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿದ್ದಾನೆ.

ದೆಹಲಿಯ ಅರವಿಂದ್ ಅಲಿಯಾಸ್ ಭೋಲಾ ಎಂಬಾತನಿಗೆ ಕುಂಭಮೇಳಕ್ಕೆ ಹೋಗಬೇಕೆಂಬ ಮಹದಾಸೆಯಿತ್ತು. ಆದರೆ ಮನೆ ತುಂಬಾ ಜನ, ಬಡತನವೂ ಇದ್ದಿದ್ದರಿಂದ ಪ್ರಯಾಗ್ ರಾಜ್ ಗೆ ಹೋಗಲು ಹಣ ಹೊಂದಿಸುವ ಪರಿಸ್ಥಿತಿಯಿರಲಿಲ್ಲ.

ಹೀಗಾಗಿ ಆತ ಕಂಡುಕೊಂಡಿದ್ದು ಕಳ್ಳತನದ ದಾರಿ. ದೆಹಲಿಯಲ್ಲಿ ಮೂರು ಮನೆಗಳಿಗೆ ಕನ್ನ ಹಾಕಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದ ಆತ ಹಣ ಹೊಂದಿಸಲು ಪ್ರಯತ್ನಿಸಿದ್ದ. ಆದರೆ ಅಷ್ಟರಲ್ಲೇ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳ್ಳತನ ಮಾಡಿ ಕೊನೆಗೆ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಲು ಹೊರಟವನು ಈಗ ಕಂಬಿ ಎಣಿಸುವಂತಾಗಿದೆ. ಈತನ ಮೇಲೆ ಈಗಾಗಲೇ 16 ಸಣ್ಣ ಪುಟ್ಟ ಕೇಸ್ ಗಳಿತ್ತು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಮಾದಕ ವಸ್ತುಗಳ ವ್ಯಸನಿಯಾಗಿದ್ದ ಎಂದೂ ಹೇಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ