Bihar: ಶಿಕ್ಷಣ ಯಾಕೆ ಸುಧಾರಿಸ್ತಿಲ್ಲ ಎನ್ನುವುದಕ್ಕೆ ಇಲ್ಲಿದೆ ನೋಡಿ ಕಾರಣ

Krishnaveni K
ಗುರುವಾರ, 23 ಜನವರಿ 2025 (19:31 IST)
Photo Credit: X
ಪಾಟ್ನಾ: ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಯಾಕೆ ಸುಧಾರಿಸುತ್ತಿಲ್ಲ ಎಂದು ನೀವು ಪ್ರಶ್ನೆ ಕೇಳಿದರೆ ಇದಕ್ಕೆ ಇಲ್ಲಿದೆ ನೋಡಿ ಉತ್ತರ.

ನಮ್ಮ ದೇಶದಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆಯೂ ಹೊರತಲ್ಲ. ಬಿಹಾರದ ಶಿಕ್ಷಣ ಇಲಾಖೆಯ ಡಿಇಒ ರಜನೀಕಾಂತ್ ಪ್ರವೀಣ್ ಎಂಬವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ನೋಟಿನ ಕಂತೆ ನೋಡಿಯೇ ದಂಗುಬಡಿದಂತಾಗಿದೆ.

ಹಾಸಿಗೆಯ ಅಡಿಯಲ್ಲಿ ನೋಟಿನ ಕಂತೆಯೇ ತುಂಬಿಡಲಾಗಿತ್ತು. ಎಲ್ಲವೂ 500, 100, 200 ಮುಖ ಬೆಲೆಯ ಕಂತೆ ಕಂತೆ ನೋಟಿನ ಕಟ್ಟುಗಳು. ಇದೆಲ್ಲವನ್ನೂ ಎಣಿಸಲು ಅಧಿಕಾರಿಗಳು ನೋಟಿನ ಮೆಷಿನ್ ನ್ನೇ ತರಬೇಕಾಗಿ ಬಂತು.

ಎಲ್ಲಾ ನೋಟಿಗಳನ್ನು ಎಣಿಸಿ ನೋಡಿದರೆ ಬರೋಬ್ಬರಿ 1.87 ಕೋಟಿ ರೂ.ಗಳ ಕಂತೆಯೇ ಸಿಕ್ಕಿದೆ.  ರಜನೀಕಾಂತ್ ಸುಮಾರು 19 ವರ್ಷ ಸೇವಾವಧಿಯ ಅನುಭವ ಹೊಂದಿದ್ದಾರೆ. ಆದರೆ ಇಷ್ಟು ಸಮಯದಲ್ಲಿ ಇವರು ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ತಮ್ಮದೇ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಈ ಅಕ್ರಮ ಹಣದಿಂದಲೇ ಅವರು ಶಾಲೆ ನಡೆಸುತ್ತಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ. ಇದೀಗ ಈತನಿಗೆ ಯಾವೆಲ್ಲಾ ಮೂಲಗಳಿಂದ ಹಣ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಭೇಟಿ ಮೊದಲು ಸಿಎಂ ನೆರೆ ಪರಿಹಾರ ಕೊಡಬೇಕಿತ್ತು: ಸಿಟಿ ರವಿ

ಎಲ್ಲಕ್ಕಿಂತ ಸೋನಿಯಾ, ರಾಹುಲ್ ಗಾಂಧಿ ನಿರ್ಣಯವೇ ಅಂತಿಮ: ಎಂಬಿ ಪಾಟೀಲ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ: ದಾಖಲೆಯ 10ನೇ ಬಾರಿ ಗದ್ದುಗೇರಲು ಮುಹೂರ್ತ ಫಿಕ್ಸ್‌

ಮಾನವ ಹಕ್ಕು ಉಲ್ಲಂಘನೆ ಸಾಬೀತು: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಗಲ್ಲುಶಿಕ್ಷೆ ಪ್ರಕಟ

ಸೌದಿಯಲ್ಲಿ ಭೀಕರ ಅಪಘಾತ: ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತೆಲಂಗಾಣದ 45 ಮಂದಿ ಸಜೀವ ದಹನ

ಮುಂದಿನ ಸುದ್ದಿ
Show comments