Select Your Language

Notifications

webdunia
webdunia
webdunia
webdunia

ವರದಕ್ಷಿಣೆ ಕಿರುಕುಳದ ಸಂದೇಶ ನೀಡಿದ್ದ ಯುವತಿ ಶವವಾಗಿ ಪತ್ತೆ

ವರದಕ್ಷಿಣೆ ಕಿರುಕುಳದ ಸಂದೇಶ ನೀಡಿದ್ದ ಯುವತಿ ಶವವಾಗಿ ಪತ್ತೆ
ತಿರುವನಂತಪುರ , ಗುರುವಾರ, 24 ಜೂನ್ 2021 (14:40 IST)
ತಿರುವನಂತಪುರ: ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ವ್ಯಾಟ್ಸಪ್ ಮೂಲಕ ಹೆತ್ತವರಿಗೆ ಫೋಟೋ ಸಮೇತ ಸಂದೇಶ ಕಳುಹಿಸಿದ್ದ 24 ವರ್ಷದ ಯುವತಿ ಕೆಲವೇ ಗಂಟೆಗಳಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ.


ಈ ಪ್ರಕರಣವೀಗ ಭಾರೀ ವೈರಲ್ ಆಗಿದೆ. ನನಗೆ ಇನ್ನಷ್ಟು ವರದಕ್ಷಿಣೆ ತರುವಂತೆ ಪತಿ ಹಿಂಸೆ ಮಾಡುತ್ತಿದ್ದಾನೆ ಎಂದು ಯುವತಿ ಗಾಯದ ಗುರುತಿನ ಫೋಟೋ ಸಮೇತ ಹೆತ್ತವರಿಗೆ ಸಂದೇಶ ಕಳುಹಿಸಿದ್ದಳು. ಇದಾದ ಕೆಲವೇ ಗಂಟೆಗಳಲ್ಲಿ ಆಕೆ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆಯುರ್ವೇದ ವೈದ್ಯ ವೃತ್ತಿ ತರಬೇತಿ ಪಡೆಯುತ್ತಿದ್ದ ಯುವತಿಗೆ ಕಳೆದ ವರ್ಷ ಕಿರಣ್ ಕುಮಾರ್ ಎಂಬಾತನ ಜೊತೆ ವಿವಾಹವಾಗಿತ್ತು. ವಿವಾಹದ ಸಂದರ್ಭದಲ್ಲಿಯೇ 100 ಚಿನ್ನದ ನಾಣ್ಯ, 1 ಎಕರೆ ಜಮೀನು, 10 ಲಕ್ಷ ರೂ. ಮೌಲ್ಯದ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು. ಹಾಗಿದ್ದರೂ ಅಳಿಯ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಪೊಲೀಸರಿಗೆ ದೂರಿದ್ದಾರೆ. ಈ ಘಟನೆ ಬಗ್ಗೆ ಸ್ವತಃ  ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಹೆಂಡತಿ ಮಾತು ಕೇಳಿ ಮಕ್ಕಳಿಗೇ ಚಿತ್ರಹಿಂಸೆ ಕೊಡುತ್ತಿದ್ದ ತಂದೆ