Webdunia - Bharat's app for daily news and videos

Install App

ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಜನನಾಂಗಕ್ಕೇ ಉಗುರಿನಿಂದ ಗಾಯ ಮಾಡಿದ ಆಯಾ

Krishnaveni K
ಬುಧವಾರ, 4 ಡಿಸೆಂಬರ್ 2024 (12:13 IST)
ತಿರುವನಂತಪುರಂ: ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಸಿಟ್ಟಿನಲ್ಲಿ ಆಯಾ ಒಬ್ಬಾಕೆ ಎರಡೂವರೆ ವರ್ಷದ ಮಗುವಿನ ಜನನಾಂಗಕ್ಕೇ ಉಗುರಿನಿಂದ ಗೀರಿ ಗಾಯ ಮಾಡಿದ ಹೇಯ ಕೃತ್ಯ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಘಟನೆ ಸಂಬಂಧ ಕೃತ್ಯವೆಸಗಿದ ಆಯಾ ಮತ್ತು ಆಕೆಯ ಇಬ್ಬರು ಸಹೋದ್ಯೋಗಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ತಿರುವನಂತರಪುರಂನ ಮಕ್ಕಳ ಕೇರ್ ಸೆಂಟರ್ ನಲ್ಲಿ ಘಟನೆ ನಡೆದಿದೆ. ಈ ಸಂಬಂಧ ಕೃತ್ಯವೆಸಗಿದ ಆಯಾ ಅಜಿತಾ, ಮಹೇಶ್ವರಿ ಮತ್ತು ಸಿಂಧು ಎಂಬವರನ್ನು ಪೋಸ್ಕೋ ಖಾಯಿದೆಯಡಿ ಬಂಧಿಸಲಾಗಿದೆ.

ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅಜಿತಾ ಎಂಬ ಆಯಾ ಕೃತ್ಯವೆಸಗಿದ್ದಾಳೆ. ಈ ಮಗು ಸದಾ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿತ್ತು ಎಂಬುದು ಆಕೆಯ ಸಿಟ್ಟಿಗೆ ಕಾರಣವಾಗಿತ್ತು. ಸಂತ್ರಸ್ತ ಮಗುವಿನ ಜೊತೆಗೆ ಆಕೆಯ ಐದು ವರ್ಷದ ಅಕ್ಕನೂ ಅದೇ ಕೇರ್ ಸೆಂಟರ್ ನಲ್ಲಿದ್ದಳು. ಇಬ್ಬರ ತಂದೆ-ತಾಯಿ ಆತ್ಮಹತ್ಯೆಗೈದು ಸಾವಿಗೀಡಾದ ನಂತರ ಮಕ್ಕಳನ್ನು ಈ ಕೇರ್ ಸೆಂಟರ್ ಗೆ ತಂದು ಬಿಡಲಾಗಿತ್ತು.

ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಉಗುರಿನಿಂದ ಜನನಾಂಗವನ್ನು ಗೀರಿ ಅಜಿತಾ ಗಾಯ ಮಾಡಿದ್ದರಿಂದ ಆಕೆಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಈ ಬಗ್ಗೆ ಕೇರ್ ಸೆಂಟರ್ ಗೆ ತಾತ್ಕಾಲಿಕವಾಗಿ ಬಂದಿದ್ದ ಮತ್ತೊಬ್ಬ ವ್ಯವಸ್ಥಾಪಕಿ ವಿಚಾರಣೆ ನಡೆಸಿದಾಗ ಮಗು ನಡೆದ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ಬಳಿಕ ಮಕ್ಕಳ ಹಕ್ಕುಗಳ ಆಯೋಗ ಪೊಲೀಸರಿಗೆ ದೂರು ನೀಡಿದೆ. ಅಜಿತಾ ಕೃತ್ಯವೆಸಗಿದ ನಂತರ ಉಳಿದಿಬ್ಬರು ಆಯಾಗಳು ಆಕೆಯ ಕುಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಹೀಗಾಗಿ ಅವರನ್ನೂ ಬಂಧಿಸಲಾಗಿದೆ. ಇದೀಗ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸತ್ಯ ಹರಿಶ್ಚಂದ್ರರ ತುಂಡುಗಳ ಬಣ್ಣವೆಲ್ಲಾ ಬಯಲಾಗ್ತಿದೆ: ಬಿ ಶ್ರೀರಾಮುಲು

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್

ಮುಂದಿನ ಸುದ್ದಿ
Show comments