Webdunia - Bharat's app for daily news and videos

Install App

ವಯನಾಡು ದುರಂತಕ್ಕೆ ಮಿಡಿದ ಕೇರಳ ಚರ್ಚ್‌ಗಳು: 100 ಮನೆಗಳ ನಿರ್ಮಾಣದ ಭರವಸೆ

Sampriya
ಮಂಗಳವಾರ, 6 ಆಗಸ್ಟ್ 2024 (17:29 IST)
ಕೇರಳ: ಮುಂಡಕೈ ಹಾಗೂ ಚುರಲ್ಮಲಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಕೇರಳ ಕ್ಯಾಥೋಲಿಕ್ ಚರ್ಚ್ ನೇತೃತ್ವದಲ್ಲಿ 100 ಮನೆಗಳನ್ನು ನಿರ್ಮಿಸಲು ಕೇರಳ ಕ್ಯಾಥೋಲಿಕ್ ಬಿಷಪ್ಸ್ ಸಮಿತಿ (ಕೆಸಿಬಿಸಿ) ನಿರ್ಧರಿಸಿದೆ.

ಕಾಕನಾಡಿನ ಮೌಂಟ್ ಸೇಂಟ್ ಥಾಮಸ್ ನಲ್ಲಿ ಅಧ್ಯಕ್ಷ ಕಾರ್ಡಿನಲ್ ಬೆಸಿಲಿಯೋಸ್ ಕ್ಲೆಮಿಸ್ ಕಥೋಲಿಕಾ ಬಾವಾ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 5 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪ್ರಸ್ತುತ ಕೇರಳ ಕ್ಯಾಥೋಲಿಕ್ ಚರ್ಚ್‌ನ ಎಲ್ಲಾ ಧರ್ಮಪ್ರಾಂತ್ಯಗಳು, ಸಮುದಾಯಗಳು, ಚರ್ಚ್ ಸಂಸ್ಥೆಗಳು, ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

"ಮೊದಲ ಹಂತದಲ್ಲಿ ವಯನಾಡು ಮತ್ತು ವಿಲಂಗಾಡ್ ಪ್ರದೇಶಗಳಲ್ಲಿ ಭೂಮಿ, ಮನೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡಿರುವ 100 ಕುಟುಂಬಗಳಿಗೆ ಸರ್ಕಾರ ಸೂಚಿಸಿದ ಸ್ಥಳದಲ್ಲಿ ಮನೆಗಳನ್ನು ನೀಡಲಾಗುತ್ತದೆ. ಈ ಮನೆಗಳಿಗೆ ಅಗತ್ಯ ಗೃಹೋಪಯೋಗಿ ಉಪಕರಣಗಳನ್ನು ಸಹ ನೀಡಲಾಗುತ್ತದೆ" ಎಂದು ಸಮಿತಿ ತಿಳಿಸಿದೆ.

"ಕೇರಳ ಕ್ಯಾಥೋಲಿಕ್ ಚರ್ಚ್‌ನ ಸಾಮಾಜಿಕ ಸೇವಾ ಅಂಗವಾದ ಕೇರಳ ಸಾಮಾಜಿಕ ಸೇವಾ ವೇದಿಕೆಯು ಪರಿಹಾರ ಕಾರ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿದೆ. ಈ ಸೇವಾ ಘಟಕವು ಕೆಸಿಬಿಸಿಯ ನ್ಯಾಯ ಶಾಂತಿ ಮತ್ತು ಅಭಿವೃದ್ಧಿ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ" ಎಂದು ಅದು ಸೇರಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

Indore murder: ರಾಜ ರಘುವಂಶಿ ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಸತ್ಯಗಳು ಬಯಲು

Assam Rain: ಅಸ್ಸಾಂ ಪ್ರವಾಹ ಇನ್ನೂ ಗಂಭೀರ, ಸಂಕಷ್ಟದಲ್ಲಿ 2.6 ಲಕ್ಷ ಜನರು

Meghalaya Murder Mystery: ಮರಣೋತ್ತರ ಪರೀಕ್ಷೆಯಲ್ಲಿ ಮಹಾಸ್ಫೋಟಕ ಮಾಹಿತಿ ಹೊರಕ್ಕೆ

Mumbai Train Tragedy: ರೈಲ್ವೆ ಮಂಡಳಿಯಿಂದ ದಿಢೀರ್‌ ಕ್ರಮ, ಇಲ್ಲಿದೆ ಡೀಟೆಲ್ಸ್‌

ಮುಂದಿನ ಸುದ್ದಿ
Show comments