Webdunia - Bharat's app for daily news and videos

Install App

ವಯನಾಡು ದುರಂತಕ್ಕೆ ಮಿಡಿದ ಕೇರಳ ಚರ್ಚ್‌ಗಳು: 100 ಮನೆಗಳ ನಿರ್ಮಾಣದ ಭರವಸೆ

Sampriya
ಮಂಗಳವಾರ, 6 ಆಗಸ್ಟ್ 2024 (17:29 IST)
ಕೇರಳ: ಮುಂಡಕೈ ಹಾಗೂ ಚುರಲ್ಮಲಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಕೇರಳ ಕ್ಯಾಥೋಲಿಕ್ ಚರ್ಚ್ ನೇತೃತ್ವದಲ್ಲಿ 100 ಮನೆಗಳನ್ನು ನಿರ್ಮಿಸಲು ಕೇರಳ ಕ್ಯಾಥೋಲಿಕ್ ಬಿಷಪ್ಸ್ ಸಮಿತಿ (ಕೆಸಿಬಿಸಿ) ನಿರ್ಧರಿಸಿದೆ.

ಕಾಕನಾಡಿನ ಮೌಂಟ್ ಸೇಂಟ್ ಥಾಮಸ್ ನಲ್ಲಿ ಅಧ್ಯಕ್ಷ ಕಾರ್ಡಿನಲ್ ಬೆಸಿಲಿಯೋಸ್ ಕ್ಲೆಮಿಸ್ ಕಥೋಲಿಕಾ ಬಾವಾ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 5 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪ್ರಸ್ತುತ ಕೇರಳ ಕ್ಯಾಥೋಲಿಕ್ ಚರ್ಚ್‌ನ ಎಲ್ಲಾ ಧರ್ಮಪ್ರಾಂತ್ಯಗಳು, ಸಮುದಾಯಗಳು, ಚರ್ಚ್ ಸಂಸ್ಥೆಗಳು, ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

"ಮೊದಲ ಹಂತದಲ್ಲಿ ವಯನಾಡು ಮತ್ತು ವಿಲಂಗಾಡ್ ಪ್ರದೇಶಗಳಲ್ಲಿ ಭೂಮಿ, ಮನೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡಿರುವ 100 ಕುಟುಂಬಗಳಿಗೆ ಸರ್ಕಾರ ಸೂಚಿಸಿದ ಸ್ಥಳದಲ್ಲಿ ಮನೆಗಳನ್ನು ನೀಡಲಾಗುತ್ತದೆ. ಈ ಮನೆಗಳಿಗೆ ಅಗತ್ಯ ಗೃಹೋಪಯೋಗಿ ಉಪಕರಣಗಳನ್ನು ಸಹ ನೀಡಲಾಗುತ್ತದೆ" ಎಂದು ಸಮಿತಿ ತಿಳಿಸಿದೆ.

"ಕೇರಳ ಕ್ಯಾಥೋಲಿಕ್ ಚರ್ಚ್‌ನ ಸಾಮಾಜಿಕ ಸೇವಾ ಅಂಗವಾದ ಕೇರಳ ಸಾಮಾಜಿಕ ಸೇವಾ ವೇದಿಕೆಯು ಪರಿಹಾರ ಕಾರ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿದೆ. ಈ ಸೇವಾ ಘಟಕವು ಕೆಸಿಬಿಸಿಯ ನ್ಯಾಯ ಶಾಂತಿ ಮತ್ತು ಅಭಿವೃದ್ಧಿ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ" ಎಂದು ಅದು ಸೇರಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments