Webdunia - Bharat's app for daily news and videos

Install App

ಋಷಿಕೊಂಡ ಬೆಟ್ಟದಲ್ಲಿ ಜಗನ್ ರೆಡ್ಡಿ 500 ಕೋಟಿ ಬಂಗಲೆ: ಸರ್ಕಾರೀ ದುಡ್ಡಲ್ಲಿ ವಿಲಾಸೀ ಬಂಗಲೆ

Krishnaveni K
ಬುಧವಾರ, 19 ಜೂನ್ 2024 (09:34 IST)
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೇ ಈ ಹಿಂದಿನ ಜಗನ್ ರೆಡ್ಡಿ ಆಡಳಿತದ ಒಂದೊಂದೇ ಹುಳುಕುಗಳನ್ನು ಹೊರತೆಗೆಯುತ್ತಿದೆ. ಋಷಿಕೊಂಡ ಬೆಟ್ಟದಲ್ಲಿ 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಬಂಗಲೆ ನೀಡಿ ಹಾಲಿ ಸರ್ಕಾರ ಬೆಚ್ಚಿಬಿದ್ದಿದೆ.

ಸರ್ಕಾರೀ ದುಡ್ಡಿನಲ್ಲಿ ಅರಮನೆಯನ್ನೂ ಮೀರಿಸುವಂತಹ ಐಷಾರಾಮಿ ಬಂಗಲೆ ಕಟ್ಟಿಸಲಾಗಿದೆ. ಅದರಲ್ಲೂ ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವಾಗ ಇಂತಹದ್ದೊಂದು ವಿಲಾಸೀ ಬಂಗಲೆ ನಿರ್ಮಿಸುವ ಔಚಿತ್ಯವೇನಿತ್ತು ಎಂದು ಟಿಡಿಪಿ ಪ್ರಶ್ನಿಸಿದೆ. ಇತ್ತೀಚೆಗಷ್ಟೇ ನಡೆದಿದ್ದ ವಿಧಾಸಭೆ ಚುನಾವಣೆಯಲ್ಲಿ ಜಗನ್ ರೆಡ್ಡಿ ಪಕ್ಷವನ್ನು ಸೋಲಿಸಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಅಧಿಕಾರಕ್ಕೇರಿತ್ತು.

ಋಷಿಕೊಂಡ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಅರಮನೆಯಂತಹ ಬಂಗಲೆ ಹೊರಗಿನವರಿಗೆ ಕಾಣದಂತೆ ಎತ್ತರದ ಕಂಪೌಂಡ್ ನಿರ್ಮಿಸಲಾಗಿತ್ತು ಎಂದೂ ಆರೋಪಿಸಲಾಗಿದೆ. ಜಗನ್ ರೆಡ್ಡಿ ವಿಲಾಸೀ ಜೀವನಕ್ಕಾಗಿ ಸರ್ಕಾರೀ ದುಡ್ಡನ್ನು ನೀರಿನಂತೆ ಖರ್ಚು ಮಾಡಿದ್ದಾರೆ.

ಈ ಬಂಗಲೆಯಲ್ಲಿ ಮುಖ್ಯಮಂತ್ರಿಗಳ ಬೆಡ್ ರೂಂನಲ್ಲಿ ಒಂದು ಬೃಹತ್ ಮಸಾಜ್ ಟೇಬಲ್ ಕೂಡಾ ನಿರ್ಮಿಸಲಾಗಿದೆ. ಒಂದು ಕಮೋಡ್ ಬೆಲೆಯೇ 10-12 ಲಕ್ಷ ರೂ.ಗಳಷ್ಟಿವೆ. ದುಬಾರಿ ಬೆಲೆಯ ಬಾತ್ ಟಬ್, ಫರ್ನಿಚರ್ ಗಳನ್ನು ಇಲ್ಲಿ ಇರಿಸಲಾಗಿದೆ. ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿಗಳಿಗೆ ಇಂತಹ ದೌಲತ್ತಿನ ಅಗತ್ಯವಿತ್ತೇ ಎಂದು ಟಿಡಿಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಂಗಲೆಯ ವಿಚಾರ ಹೊರ ಬರುತ್ತಿದ್ದಂತೇ ಪ್ರತಿಕ್ರಿಯಿಸಿರುವ ಜಗನ್ ಅವರ ವೈಎಸ್ ಆರ್ ಪಕ್ಷ ಇದು ಕೇವಲ ಜಗನ್ ಗಾಗಿ ನಿರ್ಮಿಸಿದ್ದಲ್ಲ. ಯಾವುದೇ ಮುಖ್ಯಮಂತ್ರಿಗಳೂ ಸರ್ಕಾರೀ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದಿದೆ. ಆದರೆ ಏನೇ ಇದ್ದರೂ ಇಷ್ಟೊಂದು ಖರ್ಚು ಮಾಡುವ ಅಗತ್ಯವೇನಿತ್ತು ಎಂಬುದು ಟಿಡಿಪಿ ಆರೋಪ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದು ನೀಡಿ ಬಿಜೆಪಿ ವ್ಯಂಗ್ಯ

ಬಲೂಚಿಸ್ತಾನ್ ಶಾಲಾ ಬಸ್ ಸ್ಫೋಟದಲ್ಲಿ ನಾಲ್ವರು ಸಾವು: ಪಾಕ್‌ ಆರೋಪಕ್ಕೆ ಭಾರತದ ಪ್ರತ್ಯುತ್ತರ

ರಾಜ್ಯ ಡಿಜಿಪಿ ಅಲೋಕ್ ಮೋಹನ್ ನಿವೃತ್ತಿ: ಕನ್ನಡಿಗ ಎಂ.ಎ. ಸಲೀಂಗೆ ಒಲಿದ ಮಹತ್ವದ ಹುದ್ದೆ

ಯುವತಿಯ ಶವ ಸೂಟ್‌ಕೇಸ್‌ನಲ್ಲಿ ತುಂಬಿ ರೈಲಿನಿಂದ ಎಸೆದ ಪಾಪಿಗಳು: ರೈಲ್ವೆ ಸೇತುವೆ ಬಳಿ ಪತ್ತೆ

ಜೈಲಿನಲ್ಲಿರುವ ಮಾಜಿ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂನಿಂದ ಕೊನೆಗೂ ಬಿಗ್‌ ರಿಲೀಫ್‌

ಮುಂದಿನ ಸುದ್ದಿ
Show comments