Select Your Language

Notifications

webdunia
webdunia
webdunia
webdunia

ನಶೆಯಲ್ಲಿ ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ !?

ನಶೆಯಲ್ಲಿ ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ !?
ನವದೆಹಲಿ , ಗುರುವಾರ, 24 ನವೆಂಬರ್ 2022 (08:40 IST)
ನವದೆಹಲಿ : ಮಾದಕವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನೇ ಕೊಂದ ಘೋರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
 
ಕೇಶವ್ (25) ಬಂಧಿತ ಆರೋಪಿ. ಕೇಶವ್ ಒಂದು ತಿಂಗಳ ಹಿಂದೆ ಗುರ್ಗಾಂವ್ನಲ್ಲಿ ಕೆಲಸ ಬಿಟ್ಟಿದ್ದ. ಈ ಹಿನ್ನೆಲೆಯಿಂದ ದೀಪಾವಳಿಯಿಂದ ನಿರುದ್ಯೋಗಿಯಾಗಿದ್ದ. ಕೇಶವ್ನ ಅತಿಯಾದ ಮದ್ಯವಸನದಿಂದಾಗಿ ಆತನ ಕುಟುಂಬಸ್ಥರು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

ಅದಾದ ಬಳಿಕ ಮರಳಿ ನೈಋತ್ಯ ದೆಹಲಿಯ ಪಾಲಮ್ನಲ್ಲಿರುವ ಮನೆಗೆ ಬಂದಿದ್ದ. ಆದರೆ ಮಂಗಳವಾರ ಆತ ಡ್ರಗ್ಸ್ನ ಅಮಲಿನಲ್ಲಿ ತನ್ನ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18)ಗೆ ಅನೇಕ ಬಾರಿ ಚಾಕುವಿನಿಂದ ಕತ್ತನ್ನು ಸೀಳಿ ತನ್ನ ವಿಕೃತಿಯನ್ನು ಮರೆದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಂಜಯ್ ಪಾಟೀಲ್ ಟಾಂಗ್?