ಇಂದೋರ್ (ಮಧ್ಯಪ್ರದೇಶ): ಮೇಘಾಲಯದಲ್ಲಿ ನಡೆದ ಉದ್ಯಮಿ ರಾಜಾ ರಘುವಂಶಿ ಕೊಲೆ ಸಂಬಂಧ ಅವರ ತಾಯಿ ಉಮಾ ರಘುವಂಶಿ ಅವರು ಮಂಗಳವಾರ ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ನನ್ನ ಮಗನಿಗೆ ನ್ಯಾಯ ಬೇಕು. ಆರೋಪಿಗಳನ್ನು ಗಲ್ಲಿಗೇರಿಸಬೇಕು. ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಒಬ್ಬ ವ್ಯಕ್ತಿಯೇ ಈ ಪ್ರಕರಣವನ್ನು ಸಂಘಟಿಸಿ ನಡೆಸಲು ಸಾಧ್ಯವಿಲ್ಲ. ಇದರ ಹಿಂದೆ ಇನ್ನೆಷ್ಟು ಜನ ಇದ್ದಾರೆ ಎಂದು ಆರೋಪಿಸಿದರು.
ಸೊಸೆ ಸೋನಮ್ ಬಗ್ಗೆ ಮಾತನಾಡಿದ ಉಮಾ ಅವರು, ಆಕೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ತುಂಬಾ ಖುಷಿಯಾಗಿದ್ವಿ. ನಾವು ಆಕೆಯ ಹಿಂದಿನ ವಿಚಾರವನ್ನು ಯಾವುದನ್ನು ತಿಳಿದುಕೊಂಡಿರಲಿಲ್ಲ. ನಮ್ಮ ಕುಟುಂಬಕ್ಕೆ ಬಂದ್ಮೇಲೆ ಅಷ್ಟೇ ಆಕೆ ಹೇಗಿರ್ತಾಲೆ ಎಂಬುದು ಮುಖ್ಯವಾಗಿತ್ತು. ರಾಜಾ ಮದುವೆಯಲ್ಲಿ ತುಂಬಾ ಸಂತೋಷವಾಗಿದ್ದ. ನಾನು ಕೊನೆಯ ಬಾರಿಗೆ ಅವರೊಂದಿಗೆ ಮಾತನಾಡಿದ್ದು ಮೇ 23 ರಂದು. ಕೊನೆಯವರೆಗೂ ನನಗೆ ಯಾವುದೇ ಅನುಮಾನಗಳಿರಲಿಲ್ಲ ಎಂದರು.
ಮೃತ ರಾಜಾ ರಘುವಂಶಿ ಅವರ ಸಹೋದರ ವಿಪಿನ್ ರಘುವಂಶಿ ಪ್ರತಿಕ್ರಿಯಿಸಿ, ಈ ಕೊಲೆ ಪ್ರಕರಣದಲ್ಲಿ ಸೋನಮ್ ವಿರುದ್ಧ ಹೊಸ ಆರೋಪಗಳನ್ನು ಹೊರಿಸಿದರು. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ.
ಸೋನಮ್ ರಘುವಂಶಿ ಅವರ ತಾಯಿ ತಮ್ಮ ಕುಟುಂಬದಿಂದ ಮಾಹಿತಿಯನ್ನು ಮರೆಮಾಡಿದ್ದಾರೆ ಮತ್ತು ರಾಜ್ ಕುಶ್ವಾಹ ಮತ್ತು ಅವರ ಮಗಳು ಸೋನಮ್ ನಡುವಿನ ಸಂಬಂಧದ ಬಗ್ಗೆಯೂ ಅವರಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ. ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆನಂದ್ ಎಂದು ಗುರುತಿಸಲಾದ ನಾಲ್ಕನೇ ಆರೋಪಿಯನ್ನು ಮಂಗಳವಾರ 7 ದಿನಗಳ ಕಾಲ ಟ್ರಾನ್ಸಿಟ್ ರಿಮಾಂಡ್ಗೆ ಕಳುಹಿಸಲಾಗಿದೆ.