ಇಂಧೋರ್: ದೇಶದಾದ್ಯಂತ ಸಂಚಲನ ಮೂಡಿಸಿದ ಹನಿಮೂನ್ ಹತ್ಯೆಯ ಆರೋಪಿ ಸೋನಂ ಹಾಗೂ ಗ್ಯಾಂಗ್ ತನ್ನ ಪತಿ ರಾಜ ರಘುವಂಶಿ ಜೊತೆಗೆ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರಂತೆ. ಇದು ಯಾಕೆ ಇಲ್ಲಿದೆ ವಿವರ.
ಪತಿ ರಾಜ ರಘುವಂಶಿಯನ್ನು ಕೊಲೆ ಮಾಡಲು ಸೋನಂ ಆಂಡ್ ಗ್ಯಾಂಗ್ ಮೂರು ಬಾರಿ ಪ್ರಯತ್ನಿಸಿ ಸೋತಿತ್ತು. ಕೊನೆಗೆ ಮೇಘಾಲಯಕ್ಕೆ ಹನಿಮೂನ್ ಗೆ ಕರೆದೊಯ್ಯುವ ನೆಪದಲ್ಲಿ ಗುಡ್ಡ ಗಾಡಿನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಲಾಯಿತು.
ಕೃತ್ಯದ ಬಳಿಕ ಹಂತಕರು ಮತ್ತೊಬ್ಬ ಮಹಿಳೆಯನ್ನು ಕೊಂದು ಅದು ಸೋನಂ ಎಂದು ಬಿಂಬಿಸಲು ಸ್ಕೆಚ್ ಹಾಕಿದ್ದರಂತೆ. ಯಾರಾದರೂ ಸೋನಂಳಂತೆ ತೋರುವ ಮಹಿಳೆಯನ್ನು ಕೊಂದು ಮೃತದೇಹವನ್ನು ಸುಟ್ಟು ಆಕೆ ಸೋನಂ ಎಂದು ಬಿಂಬಿಸಲು ಹಂತಕರು ಸಂಚು ಮಾಡಿದ್ದರು.
ಇದರಿಂದ ಪೊಲೀಸರು ಸೋನಂ ಕೂಡಾ ಸಾವನ್ನಪ್ಪಿದ್ದಾಳೆ ಎಂದುಕೊಂಡು ಆಕೆಯ ತಂಟೆಗೆ ಹೋಗಲ್ಲ. ಕೇಸ್ ಕ್ಲೋಸ್ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದರು.