ಇಂಧೋರ್: ಹನಿಮೂನ್ ಗೆಂದು ಪತಿಯನ್ನು ಕರೆದೊಯ್ದು ಪತ್ನಿಯೇ ಪತಿಯನ್ನು ಕೊಲೆಗೈದ ಇಂಧೋರ್ ನ ರಾಜ ರಘುವಂಶಿ ಮರಣೋತ್ತರ ಪರೀಕ್ಷೆಯಲ್ಲಿ ಸಾಕಷ್ಟು ಶಾಕಿಂಗ್ ಸತ್ಯಗಳು ಬಯಲಾಗಿವೆ.
ಮದುವೆಯಾಗಿ ಒಂದೇ ವಾರಕ್ಕೆ ಪತಿಯನ್ನು ಕರೆದುಕೊಂಡು ಹನಿಮೂನ್ ಗೆಂದು ಆರೋಪಿ ಸೋನಮ್ ಮೇಘಾಲಯಕ್ಕೆ ತೆರಳಿದ್ದಳು. ಇಲ್ಲಿ ತನ್ನ ಪ್ರಿಯಕರನ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನು ಕೊಲೆಗೈದು ಮೃತದೇಹವನ್ನು ಕಮರಿಗೆ ಬಿಸಾಕಿ ತಲೆಮರೆಸಿಕೊಂಡಿದ್ದಳು.
ಇದೀಗ ಪೊಲೀಸರು ಎಲ್ಲಾ ಆರೋಪಿಗಳನ್ನೂ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ. ಹರಿತವಾದ ಆಯುಧ ಬಳಸಿ ರಘುವಂಶಿ ತಲೆಗೆ ಹೊಡೆಯಲಾಗಿತ್ತು. ಇದರಿಂದಾಗಿ ತಲೆಯಲ್ಲಿ ಎರಡು ಮಾರಣಾಂತಿಕ ಗಾಯಗಳಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ತನ್ನ ಗಂಡನನ್ನು ಕೊಲೆಗೈಯುವ ಉದ್ದೇಶದಿಂದಲೇ ಸೋನಮ್ ಬೈಕ್ ರೈಡ್ ನೆಪದಲ್ಲಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಳು. ಹೋಗುವ ಮೊದಲು ಹಂತಕರಿಗೆ ತಮ್ಮ ಲೊಕೇಷನ್ ಕೂಡಾ ಕಳುಹಿಸಿದ್ದಳು. ಬಳಿಕ ಯಾರೂ ಇಲ್ಲದ ಸ್ಥಳ ನೋಡಿಕೊಂಡು ಗಂಡನಿಗೆ ಖೆಡ್ಡಾ ತೋಡಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ.