Select Your Language

Notifications

webdunia
webdunia
webdunia
webdunia

ಟಿಎಂಸಿ ಬಿಟ್ಟು ಹೋದವರು ಮತ್ತೇ ವಾಪಾಸ್ ಬಂದ್ರೆ ನಾನು ರಾಜೀನಾಮೆ ಕೊಡ್ತೇನೆ: ಅಭಿಷೇಕ್ ಬ್ಯಾನರ್ಜಿ

Trinamool Congress (TMC) MP Abhishek Banerjee
Photo Credit X
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಶನಿವಾರ ಪ್ರಮುಖ ರಾಜಕೀಯ ಸವಾಲೊಂದನ್ನು ಹಾಕಿದ್ದು, ಪಕ್ಷ ತೊರೆದವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಬಳಿಗೆ ಮರಳಿದರೆ ಒಂದು ಗಂಟೆಯೊಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದಾರೆ. 

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಪಕ್ಷದ ಹಿಂದಿನ ಚುನಾವಣಾ ಹಿನ್ನಡೆಗಳಿಗೆ ತಮ್ಮನ್ನು ದೂಷಿಸಲು ಪ್ರಯತ್ನಿಸುತ್ತಿರುವ ಟೀಕಾಕಾರರಿಗೆ ತಿರುಗೇಟು ನೀಡಿದರು. ಜೊತೆಗೆ, ಪಶ್ಚಿಮ ಬಂಗಾಳದಲ್ಲಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಸಾಧಿಸಿದ ಭರ್ಜರಿ ಗೆಲುವನ್ನು ಅವರು ಎತ್ತಿ ತೋರಿಸಿದರು.

 "ಇದು ಬಿಜೆಪಿಯ ಸ್ಕ್ರಿಪ್ಟ್ (ಯೋಜಿತ ನಡೆ). ಪೊಲೀಸರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಅವರ ಭಾಷೆಯಲ್ಲೇ ಮಾತನಾಡಬೇಕಾಗುತ್ತದೆ. ನೀವು ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸದಿದ್ದರೆ, ಪೊಲೀಸರು ನಿಮ್ಮನ್ನು ಬಿಡುವುದಿಲ್ಲ. ನನ್ನನ್ನು ನಿಂದಿಸಿದರೆ ಮಾತ್ರ ನೀವು ಸುರಕ್ಷಿತವಾಗಿರುತ್ತೀರಿ," ಎಂದು ಬ್ಯಾನರ್ಜಿ ಹೇಳಿದರು. 

ಚುನಾವಣೆಯ ನಂತರ ಪಕ್ಷ ತೊರೆದ ನಾಯಕರನ್ನು ಟೀಕಿಸಿದ ಟಿಎಂಸಿ ನಾಯಕ, ಅವರ ನಿರ್ಧಾರದ ಸಮಯದ ಬಗ್ಗೆ ಪ್ರಶ್ನೆ ಎತ್ತಿದರು. "ಫಲಿತಾಂಶದ ದಿನದ (4ನೇ ತಾರೀಖು) ನಂತರ ಪಕ್ಷ ತೊರೆಯುತ್ತಿರುವವರು, ಅದಕ್ಕೂ ಮುನ್ನ ಏಕೆ ಹೋಗಲಿಲ್ಲ? ನಾನು ಇಲ್ಲೇ ಇದ್ದೆನಲ್ಲವೇ? ಪಕ್ಷವು 2024ರ ಚುನಾವಣೆಯಲ್ಲಿ ಗೆದ್ದು 29 ಸ್ಥಾನಗಳನ್ನು ಪಡೆಯಿತು. ಸೋಲಿಗೆ ಅಭಿಷೇಕ್ ಬ್ಯಾನರ್ಜಿ ಕಾರಣವಾಗಿದ್ದರೆ, 2024ರ ಗೆಲುವಿನ ಶ್ರೇಯಸ್ಸೂ ಅವರಿಗೇ ಸಲ್ಲಬೇಕು. ಇದನ್ನು ನೀವು ಒಪ್ಪುತ್ತೀರಾ?" ಎಂದು ಅವರು 

"ನನ್ನ ಬಗ್ಗೆ ಯಾರಿಗಾದರೂ ಸಮಸ್ಯೆ ಇದ್ದರೆ, ನಾನು ಅವರಿಗೆ ಸವಾಲು ಹಾಕುತ್ತೇನೆ. ಸುಮಾರು 60 ಶಾಸಕರು ಮತ್ತು 20 ಸಂಸದರು ಪಕ್ಷ ತೊರೆದಿದ್ದಾರೆ. ನಾನು ನಿಮಗೆ ಮುಕ್ತ ಸವಾಲು ಹಾಕುತ್ತೇನೆ - ನೀವು ಮಮತಾ ಬ್ಯಾನರ್ಜಿ ಅವರ ಬಳಿಗೆ ಮರಳಿ ಬನ್ನಿ. 24 ಗಂಟೆಗಳಲ್ಲ, ಕೇವಲ ಒಂದು ಗಂಟೆಯೊಳಗೆ ನಾನು ನನ್ನ ರಾಜೀನಾಮೆ ಸಲ್ಲಿಸುತ್ತೇನೆಂದು ಸವಾಲೆಸೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನಮ್ಮರ ಮೇಲೆ ದೇವೇಗೌಡರ ಕುಟುಂಬದ ಸದಸ್ಯನಿಂದಲೇ ನಡೆದಿದ್ದು ಆ್ಯಸಿಡ್ ದಾಳಿ, ಎಲ್ಲಿ, ಯಾವಾಗ ಗೊತ್ತಾ