ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ೪೫೦ಕ್ಕೆ ಸಿಗುತ್ತಾ ಎಲ್‌ಪಿಜಿ ಸಿಲಿಂಡರ್..?

Webdunia
ಸೋಮವಾರ, 13 ನವೆಂಬರ್ 2023 (19:30 IST)
ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯಲು ಹಲವು ತಂತ್ರಗಳ ಮೊರೆ ಹೋಗಿದೆ. ಒಂದು ಕಡೆ ಚುನಾವಣಾ ತಂತ್ರಗಾರಿಕೆ, ಮತ್ತೊಂದು ಕಡೆ ಮತದಾರರ ಮನವೊಲಿಸಲು, ಆಶ್ವಾಸನೆ ಪಟ್ಟಿಗಳ ಸರಮಾಲೆ. ಹೀಗೆ ಒಂದಾ ಎರಡಾ ಹೇಳಿ ಬಿಜೆಪಿ ನಾಯಕರ ಸ್ಟಾಟರ್ಜಿ.

ಸದ್ಯ ಈಗ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಣ್ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಇದೇ ನವಂಬರ್ ೧೭ಕ್ಕೆ ಮಧ್ಯಪ್ರದೇಶದ ವಿಧಾನಸಭೆಗೆ ಚುನಾವಣೆ ಎದುರಾಗ್ತಾ ಇದೆ. ಹಾಗಾಗಿ ಮತ್ತೇ ಇಲ್ಲಿ ಅಧಿಕಾರವನು ಸ್ಥಾಪಿಸೋದಕ್ಕೆ ಡೆಲ್ಲಿಯ ಬಿಜೆಪಿಯ ವರಿಷ್ಠರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳ ಲೆಕ್ಕಾಚಾರದಂತೆ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ ಆಗಬಹುದೆಂಬ ಮಾತಿದೆ. ಆಡಳಿತ ವಿರೋಧಿಯ ಅಲೆ ಬಿಜೆಪಿಯನ್ನು ಕಾಡ್ತಿದೆ.

ಶತಯಗತಾಯ ಮಧ್ಯಪ್ರದೇಶದಲ್ಲಿ ಬಿಜೆಪಿಯೂ ಅಧಿಕಾರದ ಗದ್ದುಗೆಯನ್ನು ಏರಲೇಬೇಕೆಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿ  ಬಿಜೆಪಿಗೆ ಮಧ್ಯಪ್ರದೇಶದ ಮತದಾರ ಆರ್ಶಿವಾದ ಮಾಡಿದರೆ, ೪೫೦ರೂಪಾಯಿಗೆ ಅಡುಗೆ ಸಿಲಿಂಡರ್ ನೀಡುವ ಭರವಸೆಯನ್ನು ಕೊಟ್ಟಿದೆ.
 
ಹೌದು.. ಇಂದೋರ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿಯೂ ಮತ್ತೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೇ, ಎಲ್‌ಪಿಜಿ ಸಿಲಿಂಡರ್ ಕೇವಲ ೪೫೦ಕ್ಕೆ ಸಿಗಲಿದೆ ಅನ್ನುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೌದಿಯಲ್ಲಿ ಭೀಕರ ಅಪಘಾತ: ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತೆಲಂಗಾಣದ 45 ಮಂದಿ ಸಜೀವ ದಹನ

ಪಿಎಂ ಕಿಸಾನ್ ಯೋಜನೆಯ 21 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್: ಖಾತೆ ಚೆಕ್ ಮಾಡಿಕೊಳ್ಳಿ

ಬೆಂಗಳೂರಿನಿಂದ ಮಂಗಳೂರಿಗೆ ಹಗಲು ಸಂಚರಿಸುವ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್

ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ದೆಹಲಿಗೆ ಹೋಗಿ ಕೂರುವ ಘನಂದಾರಿ ಕೆಲಸ ಏನಿದೆ: ಆರ್ ಅಶೋಕ್

ಸಂಚಾರಿ ನಿಯಮ ಉಲ್ಲಂಘಿಸಿದ್ರೂ ಸಿಕ್ಕಿ ಬೀಳಬಾರದು: ಈ ಮಹಿಳೆ ಎಂಥಾ ಚಾಲಾಕಿ ನೋಡಿ

ಮುಂದಿನ ಸುದ್ದಿ
Show comments