Webdunia - Bharat's app for daily news and videos

Install App

ಪತ್ನಿಯನ್ನು ಕೊಂದು ತನ್ನನ್ನು ರಕ್ಷಿಸಿಕೊಳ್ಳಲು ಈ ಪತಿ ಮಹಾಶಯ ಎಂಥಾ ಖತರ್ನಾಕ್ ಐಡಿಯಾ ಮಾಡಿದ್ದ ಗೊತ್ತಾ?!

Webdunia
ಸೋಮವಾರ, 27 ಆಗಸ್ಟ್ 2018 (09:56 IST)
ನವದೆಹಲಿ: ಪತ್ನಿಯನ್ನು ಕೊಂದ ಈ ಪತಿ ಮಹಾಶಯ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಭಾರೀ ಉಪಾಯವನ್ನೇ ಮಾಡಿಕೊಂಡಿದ್ದ. ಅದೇನು ಗೊತ್ತಾ?

ದೆಹಲಿಯ ನಿವಾಸಿ ಲಲಿತ್ ಜೈನ್ ಎಂಬಾತ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದ. ಬಳಿಕ ತನ್ನ ಕುಟುಂಬದವರ ಸಹಾಯದಿಂದ ಮೃತದೇಹ ಯಾರಿಗೂ ಸಿಗದಂತೆ ಮಾಡಲು ಭಾರೀ ಉಪಾಯವನ್ನೇ ಹೆಣೆದ.

ಪತ್ನಿಯ ಮೃತದೇಹವನ್ನು ತನ್ನ ಕಾರಿನ ಸೀಟುಗಳ ಅಡಿಯಲ್ಲಿ ಇರಿಸಿ, ತನ್ನ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಅದೇ ಸೀಟಿನ ಮೇಲೆ ಕುಳ‍್ಳಿರಿಸಿದ್ದ. ಇದರಿಂದ ಹೆಣ ಕಾರಿನ ಸೀಟಿನ ಅಡಿಯಲ್ಲಿರುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಂತರ ಮೃತದೇಹವನ್ನು 300 ಕಿ.ಮೀ. ದೂರದ ಮುಸ್ಸೋರಿ ಬಳಿ ಕಮರಿಯೊಂದಕ್ಕೆ ಬಿಸಾಕಿ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದ.

ಇದರಿಂದ ಪೊಲೀಸರಿಗೆ ಬೇಗನೇ ಮೃತದೇಹ ಪತ್ತೆ ಮಾಡಲು ಸಾಧ‍್ಯವಾಗಲ್ಲ. ಮೃತದೇಹ ಪತ್ತೆ ಹಚ್ಚುವಷ್ಟರಲ್ಲಿ ಗುರುತು ಸಿಕ್ಕದ ಹಾಗೆ ಆಗಿರುತ್ತದೆ ಎಂಬುದು ಆತನ ಉಪಾಯವಾಗಿತ್ತು. ಆದರೆ ದುರದೃಷ್ಟವಶಾತ್ ಪೊಲೀಸರು ಈತನ ಸಂಚನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments