Select Your Language

Notifications

webdunia
webdunia
webdunia
webdunia

ಕೊಲೆ ಮಾಡಿದ ವ್ಯಕ್ತಿಗೆ ಮೃತದೇಹ ಮಣ್ಣು ಮಾಡೋದು ಹೇಗೆಂದು ತಿಳಿಯಲಿಲ್ಲ!

ಕೊಲೆ ಮಾಡಿದ ವ್ಯಕ್ತಿಗೆ ಮೃತದೇಹ ಮಣ್ಣು ಮಾಡೋದು ಹೇಗೆಂದು ತಿಳಿಯಲಿಲ್ಲ!
ನವದೆಹಲಿ , ಸೋಮವಾರ, 20 ಜೂನ್ 2022 (09:00 IST)
ನವದೆಹಲಿ: ಪತ್ನಿಯನ್ನು ಕೊಲೆ ಮಾಡಿದ ಪತಿ ಆಕೆಯ ಮೃತದೇಹವನ್ನು ಬಾತ್ ರೂಂನಲ್ಲಿ ಬಚ್ಚಿಟ್ಟು ಬಳಿಕ ಪೊಲೀಸರಿಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ.

ದಂಪತಿಗೆ ಇದು ಎರಡನೇ ಮದುವೆಯಾಗಿತ್ತು. ಇಬ್ಬರಿಗೂ ಮದುವೆಯಾಗಿ ಮೊದಲ ಸಂಬಂಧದಲ್ಲಿ ಮಕ್ಕಳೂ ಇದ್ದರು. ಈ ಮಕ್ಕಳನ್ನು ನೋಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಿತ್ತು. ಇದೇ ಆಕ್ರೋಶದಲ್ಲಿ ಆರೋಪಿ ಪತ್ನಿಯನ್ನು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಬಾತ್ ರೂಂನಲ್ಲಿಟ್ಟು ಒಂದು ರಾತ್ರಿ ಕಳೆದಿದ್ದ.

ಕೊನೆಗೆ ಮಣ್ಣು ಮಾಡುವುದು ಹೇಗೆಂದು ತೋಚದೇ ಮರುದಿನ ಸೀದಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

10 ರೂ. ಕಾಯಿನ್ ಗಳನ್ನೇ ಸಂಗ್ರಹಿಸಿ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ!