Select Your Language

Notifications

webdunia
webdunia
webdunia
webdunia

ಚಿನ್ನಾಭರಣಕ್ಕಾಗಿ ಹೆತ್ತ ಮಗಳ ಜೀವ ತೆಗೆದರಾ ಪೋಷಕರು?!

ಚಿನ್ನಾಭರಣಕ್ಕಾಗಿ ಹೆತ್ತ ಮಗಳ ಜೀವ ತೆಗೆದರಾ ಪೋಷಕರು?!
ಲಕ್ನೋ , ಬುಧವಾರ, 17 ಮಾರ್ಚ್ 2021 (09:26 IST)
ಲಕ್ನೋ: ಚಿನ್ನಾಭರಣದ ಆಸೆಯಿಂದ ವಿವಾಹಿತ ಮಹಿಳೆಯನ್ನು ಆಕೆಯ ತವರು ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಈ ಘಟನೆ ನಡೆದಿರುವುದು 2019 ರಲ್ಲಿ. ಆದರೆ ಪತಿಗೆ 2020 ರ ಡಿಸೆಂಬರ್ ನಲ್ಲಷ್ಟೇ ಪತ್ನಿಯ ಸಾವಿನ ಬಗ್ಗೆ ಅನುಮಾನವಾಗಿತ್ತಂತೆ. ಅದೇ ಕಾರಣಕ್ಕೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ.

ಪತ್ನಿ ಸರಸ್ವತಿ ಚಿನ್ನಾಭರಣ ಮತ್ತು 30 ಸಾವಿರ ಮೌಲ್ಯದ ನಗದಿನೊಂದಿಗೆ ತವರಿಗೆ ಹೋಗಿದ್ದಳು. ಈ ವೇಳೆ ಆಕೆಯ ಬಳಿಯಿದ್ದ ಚಿನ್ನಾಭರಣಕ್ಕಾಗಿ ತವರು ಮನೆಯವರು ಹತ್ಯೆ ಮಾಡಿದ್ದಾರೆ. ಆಕೆ ಮರಳಿ ಬಾರದೇ ಇದ್ದಾಗ ನನ್ನ ತಂದೆ ಮತ್ತು ಸಂಬಂಧಿಕರು ಆಕೆಯ ಮನೆಗೆ ಹೋಗಿ ಕರೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಪತ್ನಿ ಮನೆಯವರು ನನ್ನ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ನನಗೆ ನನ್ನ ಪತ್ನಿಯನ್ನು ಹತ್ಯೆ ಮಾಡಿ ಮಣ್ಣು ಮಾಡಲಾಗಿದೆ ಎಂದು ತಿಳಿದುಬಂತು. ಹೀಗಾಗಿ ದೂರು ನೀಡುತ್ತಿದ್ದೇನೆ ಎಂದು ಪತಿ ಹೇಳಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ನಗರಗಳಲ್ಲಿ ನೈಟ್ ಕರ್ಫ್ಯೂ: ರಾಜ್ಯಕ್ಕೂ ಭೀತಿ