Webdunia - Bharat's app for daily news and videos

Install App

ಅಗರಬತ್ತಿ ಮಾರಾಟದಲ್ಲಿ ಭಾರೀ ಕುಸಿತ?

Webdunia
ಬುಧವಾರ, 1 ಜೂನ್ 2022 (13:16 IST)
ನವದೆಹಲಿ :  ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟಗಳು ಬಂದಾಗ ಮಾತ್ರ ದೇವರನ್ನು ನೆನೆಯುವವರೇ ಜಾಸ್ತಿ.
 
ಕೋವಿಡ್ ಸಂಕಷ್ಟ ದೇಶಕ್ಕೆ ಯುದ್ಧ ಕಾಲಕ್ಕಿಂತಲೂ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದವು.

ಇಂಥಹ ಕಷ್ಟದ ಕಾಲದಲ್ಲಿ ಜನರು ದೇವರೆ ಮೊರೆ ಹೋದಂತೆ ತೋರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ  ಕೊರೋನಾ ಅವಧಿಯಲ್ಲಿ, ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾಗ, ದೇಶದಲ್ಲಿ ಅಗರಬತ್ತಿಗಳ ಮಾರಾಟ ಹೆಚ್ಚಾಗಿದೆ.

ಕೊರೋನಾ ಕಾಲದಲ್ಲಿ ಅಗರಬತ್ತಿ ಉದ್ಯಮದ ಮಾರಾಟದಲ್ಲಿ 30 ಪ್ರತಿಶತದಷ್ಟು ಜಿಗಿತ ಕಂಡುಬಂದಿತ್ತು ಎಂದು ತಜ್ಞರು ಹೇಳಿದ್ದಾರೆ.

ಆದರೆ ಕೊರೊನಾ ಸೋಂಕು ತಗ್ಗುತ್ತಿದ್ದಂತೆಯೇ ಜನರು ಕಚೇರಿಗೆ ತೆರಳಲಾರಂಭಿಸಿದ್ದು ಇದರೊಂದಿಗೆ ಅಗರಬತ್ತಿಗಳ ಮಾರಾಟದ ಬೆಳವಣಿಗೆಯೂ ಒಂದೇ ಅಂಕೆಗೆ ಇಳಿದಿದೆ. ಹೆಚ್ಚಿನ ಅಗರಬತ್ತಿಗಳ ವ್ಯಾಪಾರ ಅಸಂಘಟಿತ ವಲಯದಲ್ಲಿದೆ ಎಂಬುದು ಉಲ್ಲೇಖನೀಯ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments