Webdunia - Bharat's app for daily news and videos

Install App

ನಕಲಿ ದಾಖಲೆ ನೀಡಿ ಸಿಕ್ಕಿಬಿದ್ದಿದ್ದ ಯುವಕ ಮೌಂಟ್‌ ಎವರೆಸ್ಟ್‌ ಏರಿ ಅಸಲಿ ಸಾಧನೆ!

Webdunia
ಶನಿವಾರ, 4 ಜೂನ್ 2022 (18:46 IST)
ಡಿಜಿಟಲ್‌ ತಂತ್ರಜ್ಞಾನ ಬಳಸಿ ತಾನು ವಿಶ್ವದ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಏರಿದ್ದೇನೆ ಎಂದು ನಕಲಿ ದಾಖಲೆ ನೀಡಿ ನಿಷೇಧಕ್ಕೆ ಒಳಗಾಗಿದ್ದ ಯುವಕನೊಬ್ಬ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ನಿಜವಾಗಿಯೂ ಮೌಂಟ್‌ ಎವರೆಸ್ಟ್‌ ಏರಿ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.
ಹೌದು, ಭಾರತದ ನರೇಂದ್ರ ಸಿಂಗ್ ಎಂಬ ಯುವಕ, ನಾನು ಮೌಂಟ್‌ ಎವರೆಸ್ಟ್‌ ಏರಿದ್ದೇನೆ ಎಂದು ಪ್ರಮಾಣಪತ್ರವನ್ನು ಪ್ರದರ್ಶಿಸಿದ್ದ. ಆದರೆ ಪರಿಶೀಲನೆ ಮಾಡಿದಾಗ ಈ ಪ್ರಮಾಣಪತ್ರ ನಕಲಿ ಆಗಿದ್ದು, ಡಿಜಿಟಲ್‌ ತಂತ್ರಜ್ಞಾನ ಬಳಸಿ ತಿದ್ದಲಾಗಿದೆ ಎಂದು ಪತ್ತೆ ಹಚ್ಚಿದ ನೇಪಾಳ ಸರಕಾರ ನರೇಂದ್ರ ಅಲ್ಲದೇ ಇನ್ನಿಬ್ಬರ ಮೇಲೆ ೬ ವರ್ಷಗಳ ನಿಷೇಧ ಹೇರಿತ್ತು.
ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ನರೇಂದ್ರ ಸಿಂಗ್‌ ನಕಲಿಯನ್ನು ಅಸಲಿ ಮಾಡಿಯೇ ಮಾಡುತ್ತೇನೆ ಎಂದು ಪಣತೊಟ್ಟು 8,849 ಮೀಟರ್ ಎತ್ತರ ಅಂದರೆ 29,032 ಅಡಿ ಎತ್ತರದ ಪರ್ವತವನ್ನು ಏರಲು ತೀರ್ಮಾನಿಸಿದ. ಅದರಂತೆ ೬ ವರ್ಷಗಳ ನಿಷೇಧ ಶಿಕ್ಷೆ ಮುಗಿಯುತ್ತಿದ್ದಂತೆ ನಿಜವಾಗಿಯೂ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಬರೆದಿದ್ದಾನೆ.
ತಮ್ಮ ಸಾಧನೆ ಕುರಿತು ಮಾನಾಡಿರುವ ನರೇಂದ್ರ ಎವರೆಸ್ಟ್ ಎಲ್ಲಿರಿಗೂ ಕನಸ್ಸಾಗಿರುತ್ತದೆ ಆದರೆ, ಅದು ನನ್ನಗೆ ಜೀವ ಎಂದು ಹೇಳಿದ್ದಾರೆ. ನನ್ನ ಮೇಲೆ ಸಾಕಷ್ಟು ಆರೋಪಗಳಿದ್ದವು ಆದ್ದರಿಂದ ನಾನು ಎವರೆಸ್ಟ್ ಹತ್ತಿ ನನ್ನ ಸಾಮರ್ಥ್ಯವನ್ನ ನಿರೂಪಸಿದ್ದೇನೆ ಎಂದು ತಿಳಿಸಿದ್ದಾರೆ.
2020ರಲ್ಲಿ ತೇನ್ಸಿಂಗ್ ನಾರ್ಗೆ ಅಡ್ವೆಂವರ್ ಅವಾರ್ಡ್ಗೆ ನರೇಂದ್ರ ನಾಮನಿರ್ದೇಶನಗೊಂಡಿದೆ. ಆದರೆ ಪ್ರಶಸ್ತಿಯನ್ನು ತಡೆಹಿಡಿಯಲಾಗುತ್ತು ಇದು ನನ್ನಗೆ ಬಹಳ ನೋವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.
ಅವರ ನಿಷೇಧವು ಮೇ 20ಕ್ಕೆ ಮುಕ್ತಾಯವಾಯಿತ್ತು ನರೇಂದ್ರ ಈ ಭಾರೀ ತಾವು ಸ್ವಯಂ ಶಿಖರವೇರಿದ ಫೋಟೋ ಹಾಗು ಸಾಕಷ್ಟು ಪುರಾವೆಗಳನ್ನು ಪ್ರಸೃತಪಡಿಸಿದ ಕಾರಣ ನಾವು ಅವರಿಗೆ ಪ್ರಮಾಣಪತ್ರವನ್ನ ವಿತರಿಸಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ ಭೀಷ್ಮಾ ರಾಜ್ ಭಟ್ರೈ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments