Publish Date: Sun, 07 Feb 2021 (13:30 IST)
Updated Date: Sun, 07 Feb 2021 (13:38 IST)
ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ನೂರಾರು ಮನೆಗಳು, ಜನರು ಸಿಲುಕಿರುವ ಶಂಕೆಯಿದೆ.
ಹಿಮಪಾತದಿಂದಾಗಿ ಪ್ರವಾಹ ಭೀತಿ ಉಂಟಾಗಿದೆ. ಋಷಿಗಂಗಾ ವಿದ್ಯುತ್ ಯೋಜನೆಗೂ ಸಮಸ್ಯೆಯಾಗಿದೆ. ಸಾವು ನೋವಿನ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಸಾಕಷ್ಟು ಕಾರ್ಮಿಕರು ಇಲ್ಲಿ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.