Publish Date: Wed, 06 Dec 2017 (18:50 IST)
Updated Date: Wed, 06 Dec 2017 (18:55 IST)
ಕುಟುಂಬದ ಹಸಿವು ನೀಗಿಸಿಕೊಳ್ಳಲು ಎಂಟು ತಿಂಗಳಿನ ಹೆಣ್ಣು ಮಗುವೊಂದನ್ನು ಕೇವಲ ಎರಡು ನೂರು ರೂಪಾಯಿಗಳಿಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಮಹಾರಾಣಿಪುರದ ಸರತ್ ಚಂದ್ರ ಎಡಿಸಿ ಗ್ರಾಮದ ಬುಡಕಟ್ಟು ಕುಟುಂಬದ ಕರ್ಣ ದೆಬರ್ಮಾ ಅವರು ಮಗುವಿನ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಿಪಿಎಲ್ ಕಾರ್ಡ್, ಮನೆ ಹಾಗೂ ಶೌಚಾಲಯ ಒದಗಿಸಲು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬದ ನಿರ್ವಹಣೆ ಬಹಳ ಕಷ್ಟವಾಗಿದ್ದು ಮಗುವಿನ ಮಾರಾಟ ಮಾಡಬೇಕಾಯಿತು ಎಂದಿದ್ದಾರೆ.
ರಾಜಕೀಯ ಮುಖಂಡರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ, ಯಾವುದೇ ಬೇಡಿಕೆ ಈಡೇರಿಲ್ಲ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.