Publish Date: Wed, 31 Jan 2024 (19:00 IST)
Updated Date: Wed, 31 Jan 2024 (19:32 IST)
ನವದೆಹಲಿ : ಡಿಸೆಂಬರ್ ತಿಂಗಳಿಂದ ಇದುವರೆಗೂ ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ಸಂಚಾರ ವ್ಯತ್ಯಯವಾಗುವುದು ಸಾಮಾನ್ಯವಾಗಿದೆ.ಅನಾಹುತಗಳನು ತಪ್ಪಿಸುವ ಸಲುವಾಗಿ ವಿಮಾನಗಳ ಸಂಚಾರವನ್ನು ಮುಂದೂಡಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟ ಮಂಜು ಹಾಗೂ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಬುಧವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐವತ್ತು ವಿಮಾನಗಳ ಸಂಚಾರ ವಿಳಂಬಗೊಂಡಿದೆ. ಇಡೀ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನ ಪರದೆ ಸೃಷ್ಟಿಯಾಗಿದ್ದು, ಸುಮಾರು ದೂರದವರೆಗೆ ಭೂದೃಶ್ಯವೇ ಅಗೋಚರವಾಗಿದೆ.