Select Your Language

Notifications

webdunia
webdunia
webdunia
webdunia

ಉಪವಾಸ ಸತ್ಯಾಗ್ರಹಕ್ಕೆ ಮೊದಲು ಭೂರಿ ಭೋಜನ: ಕಾಂಗ್ರೆಸ್ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಉಪವಾಸ ಸತ್ಯಾಗ್ರಹಕ್ಕೆ ಮೊದಲು ಭೂರಿ ಭೋಜನ: ಕಾಂಗ್ರೆಸ್ ನೀಡಿದ ಸ್ಪಷ್ಟನೆ ಏನು ಗೊತ್ತಾ?
ನವದೆಹಲಿ , ಬುಧವಾರ, 11 ಏಪ್ರಿಲ್ 2018 (07:10 IST)
ನವದೆಹಲಿ: ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮೊದಲು ಕಾಂಗ್ರೆಸ್ ನಾಯಕರು ಭೂರಿ ಭೋಜನ ಸವಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೊಟ್ಟಿದೆ.

ಫೋಟೋದಲ್ಲಿ ಅಜಯ್ ಮಾಕೆನ್ ಸೇರಿದಂತೆ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಾಯಕರು ಕಾರ್ಯಕ್ರಮಕ್ಕೆ ಮೊದಲು ರೆಸ್ಟೋರೆಂಟ್ ನಲ್ಲಿ ಭರ್ಜರಿ ಉಪಾಹಾರ ಸೇವಿಸುತ್ತಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಈ ಕುರಿತಾಗಿ ಕಾಂಗ್ರೆಸ್ ಇದೀಗ ಸ್ಪಷ್ಟನೆ ನೀಡಿದ್ದು, ‘ಉಪವಾಸ ಸತ್ಯಾಗ್ರಹ ಸಾಂಕೇತಿಕ ಪ್ರತಿಭಟನೆಯಾಗಿತ್ತು. ಇದು 10 30 ರಿಂದ ಆರಂಭವಾಗಿತ್ತು. ನಾವು 8.30 ರ ಸುಮಾರಿಗೆ ಉಪಾಹಾರ ಸೇವಿಸಿದ್ದೆವು’ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರ ಈ ಸ್ಪಷ್ಟನೆಯೂ ಇದೀಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಂಬರ್ ಪ್ಲೇಟ್ ಮಾರಾಟಕ್ಕಿದೆ; ಬೆಲೆ ಎಷ್ಟು ಗೊತ್ತಾ…?