Publish Date: Mon, 10 Jun 2019 (15:47 IST)
Updated Date: Mon, 10 Jun 2019 (15:50 IST)
ತಂಗಿ, ತಂಗಿ ಎಂದು ಕರೆದು ನಂತರ ಅದೇ ಯುವತಿಯೊಂದಿಗೆ ಓಡಿಹೋಗಿ ಯುವಕನೊಬ್ಬ ವಿವಾಹವಾದ ವಿಚಿತ್ರ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ.
ಸಂಗಾರೆಡ್ಡಿಯ ಶಾಂತಿನಗರ ಬಡಾವಣೆಯ ನಿವಾಸಿಯಾದ 21 ವರ್ಷದ ಇಂತಿಯಾಜ್ ನಾಂಪಲ್ಲಿ ಬೇಕರಿಯಲ್ಲಿ ಉದ್ಯೋಗದಲ್ಲಿದ್ದನು. ಉದ್ಯೋದ ಅವಧಿ ಮುಗಿದ ನಂತರ ಹತ್ತಿರದಲ್ಲಿರುವ ತಮ್ಮ ಸಂಬಂಧಿಕರಾದ ಸಯ್ಯದ್ ಅಲಿ ಮನೆಗೆ ಬಂದು ಹೋಗುತ್ತಿದ್ದನು.
ಸಂಬಂಧಿಕರ ಮನೆಗೆ ನಿರಂತರವಾಗಿ ತೆರಳುತ್ತಿದ್ದ ಇಂತಿಯಾಜ್, ಸಂಬಂಧಿಕರ 19 ವರ್ಷದ ಪುತ್ರಿಯನ್ನು ತಂಗಿ ತಂಗಿ ಎಂದು ಕರೆಯುತ್ತಿದ್ದನು. ತಂಗಿ ಎಂದು ಕರೆಯುತ್ತಿದ್ದರಿಂದ ಯುವತಿಯ ಮನೆಯವರು ಅನುಮಾನ ಪಟ್ಟಿರಲಿಲ್ಲ. ಕೆಲ ದಿನಗಳ ನಂತರ ಯುವತಿಯನ್ನು ವಿವಾಹವಾಗುವುದಾಗಿ ಯುವತಿಯ ಪೋಷಕರಿಗೆ ತಿಳಿಸಿದ್ದಾನೆ. ಆದರೆ, ಯುವತಿಯ ಮನೆಯವರು ಒಪ್ಪಿರಲಿಲ್ಲ. ಪೋಷಕರಿಂದ ಯಾವುದೇ ಸಹಾಯ ದೊರೆಯುವುದಿಲ್ಲ ಎಂದು ಅರಿತು ಯುವತಿಯೊಂದಿಗೆ ಓಡಿ ಹೋಗಿ ಸದಾಶಿವನಗರದ ಮಸೀದಿಯೊಂದರಲ್ಲಿ ವಿವಾಹವಾಗಿದ್ದಾನೆ.
ಯುವತಿ ಮನೆಯಿಂದ ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಿಮ್ಮ ಪುತ್ರಿ ಮತ್ತು ಇಂತಿಯಾಜ್ ವಿವಾಹವಾಗಿದ್ದಾರೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಯುವಕ ಮತ್ತು ಯುವತಿಯ ಕೌನ್ಸಿಲಿಂಗ್ ಕೂಡಾ ಪೊಲೀಸರು ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಪೋಷಕರು ಯುವತಿಯನ್ನು ನಮ್ಮೊಂದಿಗೆ ಕಳುಹಿಸಿಕೊಡಿ ನಾವೇನು ಮಾಡುವುದಿಲ್ಲ ಎಂದು ಪೊಲೀಸರಿಗೆ ಭರವಸೆ ನೀಡಿದ್ದಾರೆ.
ಪೋಷಕರ ಮಾತು ನಂಬಿದ ಪೊಲೀಸರು ದಂಪತಿಯನ್ನು ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಹಾಗೇ ತೆರಳುತ್ತಿರುವ ಸಂದರ್ಭದಲ್ಲಿ ವಾಹನ ಅಮೀರ್ಪೇಟ್ ಹತ್ತಿರ ಬರುತ್ತಿದ್ದಂತೆ ಹತ್ತು ಮಂದಿ ಯುವಕರು ದಂಪತಿ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಇಂತಿಯಾಜ್ ಗಂಭೀರವಾಗಿ ಗಾಯಗೊಂಡರೆ ಯುವತಿ ಸಾವನ್ನಪ್ಪಿದ್ದಾಳೆ.
ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.