Select Your Language

Notifications

webdunia
webdunia
webdunia
webdunia

ಚುಡಾಯಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಗೆ ಯುವಕರು ಮಾಡಿದ್ದೇನು ಗೊತ್ತಾ?

ಚುಡಾಯಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಗೆ ಯುವಕರು ಮಾಡಿದ್ದೇನು ಗೊತ್ತಾ?
ಲಕ್ನೋ , ಮಂಗಳವಾರ, 1 ಜನವರಿ 2019 (07:10 IST)
ಲಕ್ನೋ : ಯುವಕರ ಗುಂಪೊಂದು, ಚುಡಾಯಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಗ್ರಾಮದಿಂದ ಓಡಿಸಿದ ಘಟನೆ ಉತ್ತರ ಪ್ರದೇಶದ ಭದೋಯ್ ನ ರಾಪ್ರಿ ಗ್ರಾಮದಲ್ಲಿ ನಡೆದಿದೆ.


ದಬಂಗ್ ಲಾಲ್ ಚಂದ್ ಹಾಗೂ ಆತನ ಸ್ನೇಹಿತರು ಈ ಕೃತ್ಯ ಎಸಗಿದ ಪಾಪಿಗಳಾಗಿದ್ದು, ಸಂತ್ರಸ್ತೆ ತಮ್ಮ ಗ್ರಾಮದಿಂದ ಹೊರಗಡೆ ಹೋಗಿದ್ದಾಗ ಆರೋಪಿ ಚಂದ್ ತನ್ನ ಮೂವರು ಸ್ನೇಹಿತರ ಜೊತೆ ಸೇರಿಕೊಂಡು ಮಹಿಳೆಯನ್ನು ಚುಡಾಯಿಸಿ ಹಿಂಸಿಸಿದ್ದಾನೆ. ಇದಕ್ಕೆ ಮಹಿಳೆ ಮತ್ತು ಆಕೆಯ ಪತಿಯ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ  ಅವರು ಮಹಿಳೆ ಮನೆಗೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮಹಿಳೆಯ ಸೀರೆ ಬಿಚ್ಚಿ ಅರೆಬೆತ್ತಲೆಗೊಳಿಸಿ ಗ್ರಾಮದಲ್ಲಿ ಓಡಾಡುವಂತೆ ಮಾಡಿದ್ದಾನೆ.


ಈ ಕೃತ್ಯವನ್ನು ಕೆಲವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ  ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಆರೋಪಿಗಳಲ್ಲಿ ಒಬ್ಬನಾದ ಚಂದ್ ನನ್ನು ಬಂಧಿಸಿ ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಬದುಕಿನ ಬೆಳಗಿಗೊಂದು ಸ್ವಾಗತ