Select Your Language

Notifications

webdunia
webdunia
webdunia
webdunia

ಹಣ ಪಾವತಿಸಲು ಹೇಳಿದ್ದಕ್ಕೆ ಯುವಕರು ಸೇರಿ ಮಾಲೀಕನಿಗೆ ಮಾಡಿದ್ದೇನು ಗೊತ್ತಾ?

ಹಣ ಪಾವತಿಸಲು ಹೇಳಿದ್ದಕ್ಕೆ ಯುವಕರು ಸೇರಿ ಮಾಲೀಕನಿಗೆ ಮಾಡಿದ್ದೇನು ಗೊತ್ತಾ?
ಲಖನೌ , ಮಂಗಳವಾರ, 29 ಡಿಸೆಂಬರ್ 2020 (07:48 IST)
ಲಖನೌ :  ತಿಂದ ಆಹಾರಕ್ಕೆ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಉಪಹಾರ ಗೃಹ ಮಾಲೀಕ ಮತ್ತು ಆತನ ಮಗನನ್ನು ಯುವಕರ ಗುಂಪೊಂದು ಕುದಿಯುವ ಎಣ್ಣೆಗೆ ತಳ್ಳಿದ ಘಟನೆ ಉತ್ತರ ಪ್ರದೇಶದ ಲಖನೌ ದಲ್ಲಿ ನಡೆದಿದೆ.

ರಾತ್ರಿಯ ವೇಳೆ ಉಪಹಾರ ಗೃಹಕ್ಕೆ ಬಂದ ಯುವಕರ ಗುಂಪು  ಸಮೋಸಾ ಮತ್ತು ಪೂರಿಗಳನ್ನು ಸೇವಿಸಿದ್ದಾರೆ. ಬಳಿಕ  ಅದಕ್ಕೆ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಮಾಲೀಕ ಮತ್ತು ಆತನ ಮಗನನ್ನು ಕುದಿಯುವ ಎಣ್ಣೆಯ ಪಾತ್ರೆಯೊಳಗೆ ದೂಡಿದ್ದಾರೆ. ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ.1ರಿಂದ ಶಾಲೆ ಆರಂಭಿಸುವ ಬಗ್ಗೆ ಸಿಎಂ ಹೇಳಿದ್ದೇನು?