Select Your Language

Notifications

webdunia
webdunia
webdunia
webdunia

ಮಾಲೀಕ ಹಾಗೂ ಆತನ ಪತ್ನಿಯ ಕಿರುಕುಳಕ್ಕೆ ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ?

ಮಾಲೀಕ ಹಾಗೂ ಆತನ ಪತ್ನಿಯ ಕಿರುಕುಳಕ್ಕೆ ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ?
ಗಾಂಧಿನಗರ , ಶುಕ್ರವಾರ, 20 ಡಿಸೆಂಬರ್ 2019 (06:36 IST)
ಗಾಂಧಿನಗರ : ಮಾಲೀಕನ ಒತ್ತಾಯದ ಮೇರೆಗೆ ಆತನ  ಪತ್ನಿಯನ್ನು ಪ್ರೀತಿಸಿ, ಸಂಬಂಧ ಬೆಳೆಸಿದ ಯುವಕನೊಬ್ಬ  ಕೊನೆಗೆ  ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತಿನಲ್ಲಿ ನಡೆದಿದೆ.



ನಿಖಿಲ್ ಪರ್ಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಮದುವೆಗೆ ಬಳಸುವ ಅಲಂಕಾರಿಕ ವಸ್ತುಗಳ ಮಾರಾಟ ಮಾಡುತ್ತಿದ್ದ ಮಾಲೀಕ ತನ್ನ ಜೊತೆ ಕೆಲಸ ಮಾಡುತ್ತಿದ್ದ ಈ ಯುವಕನಿಗೆ ತನ್ನ ಪತ್ನಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದಾನೆ. ಆಗ ಯುವಕ ಮಾಲೀಕನ ಪತ್ನಿಯನ್ನು ಪ್ರೀತಿಸಿ ಸಂಬಂಧ ಬೆಳೆಸಿದ್ದಾನೆ. ನಂತರ ಮಾಲೀಕ ಈ ಸಂಬಂಧ ಕೊನೆಗೊಳಿಸುವಂತೆ ಹೇಳಿದ್ದಾನೆ . ಆದರೆ ಮಾಲೀಕನ ಪತ್ನಿ ಸಂಬಂಧ ಮುಂದುವರಿಸುವಂತೆ ಹೇಳಿದ್ದಾಳೆ. ಈ ಕಿರುಕುಳದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಈ  ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಯುವಕನ ಮೊಬೈಲ್ ಮೆಸೇಜ್ ಗಳಿಂದ ಸತ್ಯಾಂಶ ತಿಳಿದುಬಂದಿದ್ದ ಹಿನ್ನಲೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಹಾಗೂ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ  ಮಾಲೀಕ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವೈಟ್ ಹಾಲ್ ನ ಗೌರವಾನ್ವಿತ ಮೇಯರ್ ಪಟ್ಟ ಗಿಟ್ಟಿಸಿಕೊಂಡ 7 ತಿಂಗಳ ಮಗು