Webdunia - Bharat's app for daily news and videos

Install App

ಪತ್ನಿಯ ಲೈಂಗಿಕ ದಾಹಕ್ಕೆ ಕಂಗಾಲಾದ ಪತಿ ಕೋರ್ಟ್‌ಗೆ ಮೊರೆ

Webdunia
ಸೋಮವಾರ, 20 ನವೆಂಬರ್ 2023 (11:38 IST)
ಪತಿಯೊಬ್ಬ,  ಕೌಟುಂಬಿಕ ಕೋರ್ಟ್‌ ಸಂಪರ್ಕಿಸಿ ತಮ್ಮ ಪತ್ನಿ ಹಠಮಾರಿ, ಆಕ್ರಮಣಕಾರಿ ಮತ್ತು ಸರ್ವಾಧಿಕಾರಿಯಾಗಿದ್ದು, ಮತ್ತು  ತೃಪ್ತಿಪಡಿಸಲಾಗದಷ್ಟು ಕಾಮದಾಹವನ್ನು ಅವಳು ಹೊಂದಿದ್ದಾಳೆ. ಏಪ್ರಿಲ್ 2022ರಿಂದ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಕೋರ್ಟ್‌ಗೆ ಪತಿ ನಿವೇದಿಸಿಕೊಂಡು ವಿವಾಹ ವಿಚ್ಚೇಧನಕ್ಕೆ ಮನವಿ ಮಾಡಿಕೊಂಡ ಘಟನೆ ವರದಿಯಾಗಿದೆ. 
 
ಕೆಲವು ಪುರುಷರು ಕಾಮಪಿಪಾಸುಗಳಂತೆ ವರ್ತಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಮಹಿಳೆಯೊಬ್ಬರಿಗೆ ಸೆಕ್ಸ್ ಬಗ್ಗೆ ತಣಿಯಲಾರದ ಹಸಿವು, ಆಕ್ರಮಣಕಾರಿ ಮನೋಭಾವವನ್ನು ಹೊಂದಿದ್ದರು. ಅವರ ಸೆಕ್ಸ್ ದಾಹವನ್ನು ತಣಿಸಲಾಗದೇ ಅವರ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಕ್ಕೆ ಮುಂಬೈನ ಕೌಟುಂಬಿಕ ಕೋರ್ಟ್ ಡೈವರ್ಸ್‌ಗೆ ಅನುಮತಿ ನೀಡಿದೆ. 
 
ತನಗೆ ಔಷಧಿಗಳನ್ನು ಕುಡಿಸಿ, ಮದ್ಯಪಾನ ಮಾಡುವಂತೆ ಬಲವಂತ ಮಾಡುತ್ತಾಳೆ ಎಂದೂ ಪತಿ ಆರೋಪಿಸಿದ್ದರು.  ಅಸಹಜ ಲೈಂಗಿಕ ಕ್ರಿಯೆ ಮಾಡುವಂತೆ ಪತ್ನಿ ಒತ್ತಾಯಿಸುತ್ತಾಳೆ. ಅದಕ್ಕೆ ಪ್ರತಿರೋಧಿಸಿದಾಗ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ. ಅವಳ ಒತ್ತಡಕ್ಕೆ ಮಣಿದು ಅಸಹಜ ಲೈಂಗಿಕ ಕ್ರಿಯೆ ಮಾಡುತ್ತಿದ್ದೆ ಎಂದು ಪತಿ ದೂರಿದ್ದಾನೆ. 
 
 ತಾನು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದು, ಆಯಾಸವಾಗಿದ್ದಾಗಲೂ ಅವಳ ಸುಖವನ್ನು ತಣಿಸಬೇಕಾಗಿದೆ ಎಂದು ದೂರಿದ್ದರು. ತನ್ನ ಬೇಡಿಕೆಗಳನ್ನು ತಣಿಸದಿದ್ದರೆ, ಅವನ ಭಾವನೆಗಳಿಗೆ ಬೆಲೆ ಕೊಡದೇ ಇನ್ನೊಬ್ಬನ ಬಳಿಗೆ ಹೋಗುವುದಾಗಿಯೂ ಅವಳು ಬೆದರಿಕೆ ಹಾಕುತ್ತಿದ್ದಳು. 
 
2012ರಲ್ಲಿ ಹೊಟ್ಟೆನೋವಿನಿಂದ ಆಸ್ಪತ್ರೆ ಸೇರಿ 2 ವಾರಗಳ ಬಳಿಕ ಮನೆಗೆ ಹಿಂತಿರುಗಿದಾಗಲೂ ಪತ್ನಿ ಲೈಂಗಿಕ ತೃಪ್ತಿ ನೀಡುವಂತೆ ಒತ್ತಾಯಿಸಿದಳು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ತನ್ನ ಪತ್ನಿ ತನ್ನ ಕ್ರೂರ ವರ್ತನೆಯಿಂದ ಜೀವನವನ್ನು ಭಯಾನಕವಾಗಿಸಿದ್ದಾಳೆ.ಅವಳ ಅತಿಯಾದ ಸೆಕ್ಸ್ ಬಯಕೆಯಿಂದ ತಾನು ಅವಳ ಜೊತೆ ಒಂದೇ ಸೂರಿನಡಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಕೋರಿದ್ದನು. ನ್ಯಾಯಾಧೀಶರು ಅರ್ಜಿಗೆ ಮನ್ನಣೆ ನೀಡಿ ವಿಚ್ಛೇದನಕ್ಕೆ ಅನುಮತಿ ನೀಡಿದ್ದರಿಂದ ಪತಿಯಲ್ಲಿ ಸಂತೃಪ್ತ ಭಾವ ಮೂಡಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಶೂ ಹಾಕಿಕೊಂಡು ಹೋಮದಲ್ಲಿ ಪಾಲ್ಗೊಂಡ ಲಾಲೂ ಯಾದವ್

ಧರ್ಮಸ್ಥಳ ಅನಾಮಿಕ ದೂರುದಾರನ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಎಸ್ಐಟಿ

ಶಕ್ತಿ ಯೋಜನೆಗೆ ರೆಕಾರ್ಡ್ ಹಾಗಿರ್ಲಿ, ಸಾರಿಗೆ ನೌಕರರಿಗೆ ಸಂಬಳ ಹಾಕಿ: ಸಿಎಂಗೆ ನೆಟ್ಟಿಗರ ಕ್ಲಾಸ್

ಶಕ್ತಿ ಯೋಜನೆ ಗೋಲ್ಡನ್ ಬುಕ್ ರೆಕಾರ್ಡ್ ಪಟ್ಟಿಗೆ: ಸಿದ್ದರಾಮಯ್ಯ ಖುಷಿಗೆ ಹೇಳಿದ್ದೇನು ನೋಡಿ

ಮೋದಿ, ಪುಟಿನ್ ಭಾರೀ ಫ್ರೆಂಡ್ಸ್ ಎನ್ನುವುದಕ್ಕೆ ಇದೇ ಸಾಕ್ಷಿ

ಮುಂದಿನ ಸುದ್ದಿ