Select Your Language

Notifications

webdunia
webdunia
webdunia
webdunia

ಇಹಲೋಕ ತ್ಯಜಿಸಿದ ಮೇಲೂ ಜಯಲಲಿತಾ ಪಕ್ಷದೊಂದಿಗೆ ಕರುಣಾನಿಧಿಗೆ ತಿಕ್ಕಾಟ

ಇಹಲೋಕ ತ್ಯಜಿಸಿದ ಮೇಲೂ ಜಯಲಲಿತಾ ಪಕ್ಷದೊಂದಿಗೆ ಕರುಣಾನಿಧಿಗೆ ತಿಕ್ಕಾಟ
ಚೆನ್ನೈ , ಬುಧವಾರ, 8 ಆಗಸ್ಟ್ 2018 (09:56 IST)
ಚೆನ್ನೈ: ಬದುಕಿದ್ದಾಗ ಜಯಲಲಿತಾ ಮತ್ತು ಕರುಣಾನಿಧಿ ಪರಸ್ಪರ ರಾಜಕೀಯವಾಗಿ ಕೆಸರೆರಚಾಟ ನಡೆಸಿಕೊಂಡೇ ಬಂದವರು. ವಿಪರ್ಯಾಸವೆಂದರೆ ಕರುಣಾನಿಧಿ ತೀರಿಕೊಂಡ ಮೇಲೂ ಈಗ ಜಯಲಲಿತಾ ಪಕ್ಷದೊಂದಿಗೆ ಗುದ್ದಾಟ ನಡೆಸಬೇಕಿದೆ.
 

ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಯಲಲಿತಾರ ಆಡಳಿತಾರೂಢ ಎಐಎಡಿಎಂಕೆ ಪಕ್ಷ ತಕರಾರು ತೆಗೆದಿದೆ. ಇದರ ವಿಚಾರಣೆ ಮದ್ರಾಸ್ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಜಯಲಲಿತಾ ಸಮಾಧಿಗೆ ಅವಕಾಶ ಮಾಡಿಕೊಟ್ಟಿರುವಾಗ ಕರುಣಾನಿಧಿಗೆ ಯಾಕೆ ಅವಕಾಶ ಕೊಡುತ್ತಿಲ್ಲ. ಏಳು ದಿನಗಳ ಶೋಕಾಚರಣೆ ಮಾಡುತ್ತೀರಿ. ಹಾಗಿದ್ದರೆ ಸಮಾಧಿಗೆ ಜಾಗ ಕೊಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಆದರೆ ಕರುಣಾನಿಧಿ ಹಾಲಿ ಸಿಎಂ ಅಲ್ಲ ಎಂದು ಎಐಎಡಿಎಂಕೆ ವಾದ ಮಂಡಿಸಿದೆ. ಜಯಲಲಿತಾಗೆ ತಮ್ಮ ರಾಜಕೀಯ ಗುರುವಿನ ಜತೆಗೆ ಸಮಾಧಿ ಮಾಡಲು ಅವಕಾಶ ಕೊಟ್ಟಿರುವಾಗ ಕರುಣಾನಿಧಿಗೆ ಯಾಕೆ ಕೊಡುತ್ತಿಲ್ಲ ಎಂದು ಡಿಎಂಕೆ ಬೇಸರ ವ್ಯಕ್ತಪಡಿಸಿದೆ. ಅಂತೂ ಪ್ರಮುಖ ನಾಯಕನೊಬ್ಬನ ಅಗಲುವಿಕೆಯ ಸಂದರ್ಭದಲ್ಲೂ ಈ ರೀತಿಯ ರಾಜಕೀಯ ಕೆಸರೆರಚಾಟ ನಡೆಯುತ್ತಿರುವುದು ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಸೂಟು ಬೂಟು ಹಾಕಿದ್ರೆ ಹೋಟೆಲ್ ವೈಟರ್ ಥರಾ ಕಾಣಿಸ್ತೀಯಾ..! ಶಶಿ ತರೂರ್ ಗೆ ಸಂಸದ ಸುಬ್ರಮಣಿಯನ್ ಸ್ವಾಮಿ ತರಾಟೆ