Select Your Language

Notifications

webdunia
webdunia
webdunia
webdunia

ರೈಲು ಸಂಚಾರಕ್ಕೆ ಅಡ್ಡಿ?

ರೈಲು ಸಂಚಾರಕ್ಕೆ ಅಡ್ಡಿ?
ನವದೆಹಲಿ , ಸೋಮವಾರ, 8 ಆಗಸ್ಟ್ 2022 (09:43 IST)
ನವದೆಹಲಿ : ದೆಹಲಿ- ರೋಹ್ಟಕ್ ಮಾರ್ಗದಲ್ಲಿ ಬರುತ್ತಿದ್ದ ಗೂಡ್ಸ್ ರೈಲಿನ 8 ಬೋಗಿಗಳು ಹರಿಯಾಣದ ಖರಾವರ್ ರೈಲು ನಿಲ್ದಾಣದ ಬಳಿ ಹಳಿತಪ್ಪಿ, ರೈಲು ಸಂಚಾರಕ್ಕೆ ಅಡ್ಡಿಯಾಯಿತು.

ಗೂಡ್ಸ್ ರೈಲು ದೆಹಲಿಯ ಶಕುರ್ ಬಸ್ತಿಯಿಂದ ರೋಹ್ಟಕ್ ಮೂಲಕ ಸೂರತ್ಗಡಕ್ಕೆ ಹೋಗುತ್ತಿತ್ತು. ಅದರಲ್ಲಿ ಕಲ್ಲಿದ್ದಲು ತುಂಬಲಾಗಿತ್ತು. ಆದರೆ ಹರಿಯಾಣದಲ್ಲಿ ರೈಲಿನ 7 ಬೋಗಿಗಳು ಹಳಿ ತಪ್ಪಿದೆ. ಇದಾದ ನಂತರ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.

ಘಟನೆ ಸಂಬಂಧಿಸಿ ರೈಲ್ವೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಅಪಘಾತದ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಈಶಾನ್ಯ ರೈಲ್ವೆ ಟ್ವೀಟ್ ಮಾಡಿದ್ದು, ಉತ್ತರ ರೈಲ್ವೆಯ ದೆಹಲಿ ವಿಭಾಗದ ಖರವಾಡ್ ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಕಾರಣ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಿಳಿಸಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯ ಕೊಂದ ಪತಿ