Webdunia - Bharat's app for daily news and videos

Install App

ಮದುವೆ ಡ್ರೆಸ್ ಕದಿಯಲು ಮಹಿಳೆಯನ್ನು ಕೊಲೆ ಮಾಡಿದ ದಂಪತಿ!

Webdunia
ಬುಧವಾರ, 12 ಸೆಪ್ಟಂಬರ್ 2018 (08:58 IST)
ನೋಯ್ಡಾ: ಯಾವುದೆಲ್ಲಾ ಕಾರಣಕ್ಕೆ ಕೊಲೆ ನಡೆಯುತ್ತದೆ ಎಂದು ಈ ಘಟನೆ ಓದಿದರೆ ಅಚ್ಚರಿಯಾಗುತ್ತದೆ. ಇಲ್ಲೊಬ್ಬ ದಂಪತಿ ಮದುವೆಯ ಬೆಲೆ ಬಾಳುವ ಡ್ರೆಸ್ ಕದಿಯಲು ತಮ್ಮ ಬಂಧುವನ್ನೇ ಕೊಲೆ ಮಾಡಿದ್ದಾರೆ.

ಇದು ನಡೆದಿರುವುದು ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ. ಕೊಲೆಯಾದ 25 ವರ್ಷದ ಮಹಿಳೆ ಮಾಲಾ ಗುಪ್ತಾ ಎರಡು ವರ್ಷಗಳ ಹಿಂದೆ ಕುಟುಂಬದವರ ವಿರೋಧದ ನಡುವೆ ಮದುವೆಯಾಗಿದ್ದಳು. ಮದುವೆ ಬಳಿಕ ಇವರಿಬ್ಬರೂ ಗಾಝಿಯಾಬಾದ್ ನ ಅಪಾರ್ಟ್ ಮೆಂಟ್ ಒಂದರ ಎರಡನೇ ಮಹಡಿಯಲ್ಲಿ ವಾಸವಿದ್ದರು.

ಅದೇ ಅಪಾರ್ಟ್ ಮೆಂಟ್ ನ ಒಂದನೇ ಮಹಡಿಯಲ್ಲಿ ವಾಸವಿದ್ದ ಇವರ ಬಂಧುಗಳೆನಿಸಿಕೊಂಡ ಆರೋಪಿ ದಂಪತಿ ಸೌರವ್ ದಿವಾಕರ್ ಮತ್ತು ರಿತು ನೆಂಟಸ್ತನ ನೆಪದಿಂದ ಕೊಲೆಗೀಡಾದ ಮಹಿಳೆ ಮಾಲಾ ಮನೆಗೆ ಬಂದಿದ್ದರು. ಈ ವೇಳೆ ಮಾಲಾ ತನ್ನ ಮದುವೆಯ ಸಂದರ್ಭದಲ್ಲಿ ತೊಟ್ಟುಕೊಂಡಿದ್ದ ಬೆಲೆ ಬಾಳುವ ಉಡುಪುಗಳನ್ನು ಇವರಿಗೆ ತೋರಿಸಿದ್ದಳು.

ಈ ವೇಳೆ ದುಬಾರಿ ಬೆಲೆಯ ಡ್ರೆಸ್ ನೋಡಿ ದುರಾಸೆಗೊಳಗಾದ ದಂಪತಿ ಮರುದಿನ ಮಾಲಾಳನ್ನು ಊಟದ ನೆಪದಲ್ಲಿ ತಮ್ಮ ಮನೆಗೆ ಕರೆದೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಮಾಲಾ ಇರುವ ಫ್ಲ್ಯಾಟ್ ಗೆ ತೆರಳಿ ಎರಡು ಸೂಟ್ ಕೇಸ್ ತೆಗೆದುಕೊಂಡು ಒಂದರಲ್ಲಿ ಬೆಲೆ ಬಾಳು ಡ್ರೆಸ್ ಗಳನ್ನು ತುಂಬಿದ್ದಾರೆ. ಇನ್ನೊಂದು ಸೂಟ್ ಕೇಸ್ ನ್ನು ಮನೆಗೆ ತಂದು ಮಾಲಾ ಮೃತದೇಹವನ್ನು ತುಂಬಿ ಗಾಝಿಯಾಬಾದ್ ನ ನಡುರಸ್ತೆಯೊಂದರಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ತಪ್ಪೊಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments