Webdunia - Bharat's app for daily news and videos

Install App

ಗರ್ಭ ಧರಿಸಿದ್ದೇ ಗೊತ್ತಿರದ ಅಪ್ರಾಪ್ತೆಗೆ ಬಾತ್ ರೂಂನಲ್ಲಿ ಹೆರಿಗೆ!

Webdunia
ಬುಧವಾರ, 12 ಜನವರಿ 2022 (16:56 IST)
ತಾಯಿಯೊಬ್ಬಳು ತನಗೆ ಬೇಡವಾದ ಮಗುವನ್ನು ನ್ಯೂ ಮೆಕ್ಸಿಕೋದ ಸ್ಟೋರ್ನ ಹೊರಗೆ ಇರುವ ಕಸದ ತೊಟ್ಟಿಗೆ ಎಸೆದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.

ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪ್ರಾಪ್ತೆಯಾಗಿದ್ದ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು.

ಆದರೆ, ಆ ಮಗುವನ್ನು ಸಾಕಲು ಸಾಧ್ಯವಾಗದ ಕಾರಣ ಮತ್ತು ಆ ಮಗುವನ್ನು ಆಕೆಯ ಹೆತ್ತವರು ಒಪ್ಪಿಕೊಳ್ಳದ ಕಾರಣದಿಂದ ತನ್ನ ನವಜಾತ ಶಿಶುವನ್ನು ಆಕೆ ಕಸದ ತೊಟ್ಟಿಗೆ ಹಾಕಿದ್ದಾಳೆ. ವಿಷಯ ಗೊತ್ತಾದ ಕೂಡಲೆ ಆ ಮಗುವನ್ನು ರಕ್ಷಿಸಲಾಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಳಿ ಕಾರಿನಲ್ಲಿ ಬಂದು, ಹಿಂದಿನ ಸೀಟಿನಿಂದ ಕಪ್ಪು ಚೀಲವನ್ನು ತೆಗೆದು ಕಸದ ತೊಟ್ಟಿಗೆ ಎಸೆದು ವಾಪಾಸ್ ಕಾರಿನಲ್ಲಿ ಹೋಗಿರುವುದು ದಾಖಲಾಗಿದೆ. ಆ ಕಪ್ಪು ಚೀಲದೊಳಗೆ ಆಗ ತಾನೇ ಹುಟ್ಟಿದ್ದ ಮಗುವಿತ್ತು.

ಈ ಘಟನೆ ನಡೆದು ಸುಮಾರು ಆರು ಗಂಟೆಗಳ ನಂತರ ಕೆಲವು ಜನರ ಗುಂಪು ಬಂದು ಆ ಕಸದ ಬುಟ್ಟಿಯಲ್ಲಿದ್ದ ಚೀಲವನ್ನು ಎತ್ತಿ ನೋಡಿದೆ. ಅವರಲ್ಲಿ ಕೆಲವರು ಆ ಚೀಲವನ್ನು ಬಿಚ್ಚಿದಾಗ ಮಗು ಇರುವುದು ಗೊತ್ತಾಗಿದೆ. ಅಳುತ್ತಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಆ ದಾರಿಯಲ್ಲಿ ಬರುತ್ತಿದ್ದ ಕಾರ್ಮಿಕರು ದೊಡ್ಡದಾದ ಕಸದ ಬುಟ್ಟಿಯಲ್ಲಿ ತಮಗೆ ಏನಾದರೂ ಉಪಯೋಗಕ್ಕೆ ಬರುವಂಥದು ಸಿಗಬಹುದು ಎಂದು ಜಾಲಾಡಿದ್ದಾರೆ. ಆಗ ಚೀಲದೊಳಗಿಂದ ಶಬ್ದ ಕೇಳಿದ್ದರಿಂದ ಆ ಚೀಲವನ್ನು ತೆರೆದು ನೋಡಿದ್ದಾರೆ. ಅದರೊಳಗೆ ಆ ದಿನವೇ ಹುಟ್ಟಿದ ಗಂಡು ಮಗುವಿತ್ತು. ಒಣಗಿದ ರಕ್ತದಿಂದ ಕೂಡಿದ್ದ ಟವೆಲ್ನಲ್ಲಿ ಸುತ್ತಿ ಮಗುವನ್ನು ಕವರ್ನಲ್ಲಿ ಕಟ್ಟಲಾಗಿತ್ತು.

ಹಾಗೇ, ವೀಡಿಯೊವನ್ನು ಪರಿಶೀಲಿಸಿದ ನಂತರ 17 ವರ್ಷದ ಆ ಯುವತಿ (ಮಗುವಿನ ತಾಯಿ) ವಿರುದ್ಧ ಕೊಲೆ ಯತ್ನ ಮತ್ತು ಮಕ್ಕಳ ನಿಂದನೆ ಆರೋಪದಡಿ ಕೇಸ್ ದಾಖಲಿಸಲಾಗಿದೆ. ಆಕೆ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

Raghuvanshi Murder Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Mallikarjun Kharge: 11 ವರ್ಷಗಳ ಮೋದಿಯ ತಪ್ಪುಗಳ ಲೆಕ್ಕ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

Mangaluru: ಬಾಲ್ಯದ ಕನಸ್ಸಿನಂತೆ ನೌಕಾಪಡೆ ಸೇರಿಕೊಂಡ ಮಂಗಳೂರಿನ ಯುವತಿ

Karnataka Weather: 48 ಗಂಟೆಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments