Webdunia - Bharat's app for daily news and videos

Install App

ದುಡ್ಡಿನ ಆಸೆಗೆ ತಂಗಿಯನ್ನೇ ಮದುವೆಯಾಗಲು ಹೊರಟ ಅಣ್ಣ

Krishnaveni K
ಮಂಗಳವಾರ, 19 ಮಾರ್ಚ್ 2024 (12:04 IST)
ಲಕ್ನೋ: ಅಣ್ಣ-ತಂಗಿಯ ಸಂಬಂಧ ಎಂದರೆ ನಮ್ಮ ದೇಶದಲ್ಲಿ ಅಷ್ಟೇ ಪಾವಿತ್ರ್ಯತೆ ಇದೆ. ಅವರ ಸಂಬಂಧ ಅಷ್ಟೇ ನಿಷ್ಕಲ್ಮಶ. ಆದರೆ ಇದೀಗ ದುಡ್ಡಿನ ಆಸೆಗೆ ಇಲ್ಲೊಬ್ಬ ಅಣ್ಣ-ತಂಗಿ ಸಂಬಂಧವನ್ನೇ ಬಲಿಕೊಟ್ಟಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಹಿಂದುಳಿದ ಜೋಡಿಗಳ ಸಾಮೂಹಿಕ ಮದುವೆ ಮಾಡಿಸಿ ನವಜೋಡಿಗೆ ಮನೆ ಸಾಮಾನು, 35 ಸಾವಿರ ರೂ. ನಗದು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು ಅಣ್ಣ-ತಂಗಿ ಮದುವೆಯ ನಾಟಕವಾಡಿದ್ದಾರೆ.

ಸರ್ಕಾರದ ಯೋಜನೆಯನ್ನು ಹೇಗಾದರೂ ಲಾಭಕ್ಕೆ ಬಳಸಿಕೊಳ‍್ಳಲು ಎಲ್ಲರೂ ಒಂದಿಲ್ಲೊಂದು ದಾರಿ ನೋಡಿಕೊಳ್ಳುತ್ತಾರೆ. ಆದರೆ ಈ ಅಣ್ಣ-ತಂಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧದ ಪಾವಿತ್ರ್ಯತೆಯನ್ನೇ ಹಾಳು ಮಾಡಲು ಹೊರಟಿದ್ದಾರೆ. ಹಣದ ಆಸೆಗೆ ಬಿದ್ದು ಮದುವೆಯಾಗಲು ಹೊರಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ವಿಶೇಷವೆಂದರೆ ತಂಗಿಗೆ ಈ ಮೊದಲೇ ಮದುವೆಯಾಗಿತ್ತು. ಗಂಡ ಇನ್ನೊಂದು ಊರಿನಲ್ಲಿದ್ದ. ತಂಗಿಗೆ ಇನ್ನೊಂದು ವರನೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಮೊದಲೇ ಯೋಜನೆ ರೂಪಿಸಿದಂತೆ ವರ ಮಂಟಪಕ್ಕೆ ಬರಲೇ ಇಲ್ಲ. ಬಳಿಕ ಅಲ್ಲೇ ಇದ್ದ ಅಣ್ಣನ ಮನವೊಲಿಸುವ ನಾಟಕವಾಡಿ ಮದುವೆ ಮಾಡಿಸಿದ್ದಾರೆ.  ಇವರ ಈ ನಾಟಕ ಇದೀಗ ಬಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments