Publish Date: Sat, 26 Jun 2021 (14:16 IST)
Updated Date: Sat, 26 Jun 2021 (11:13 IST)
ಲಕ್ನೋ: ಮದುವೆ ಮುರಿದು ಬೀಳುವುದಕ್ಕೆ ಹಲವು ಕಾರಣಗಳಿವೆ. ಆದರೆ ಉತ್ತರ ಪ್ರದೇಶದಲ್ಲಿ ವಧುವೊಬ್ಬಳು ಕನ್ನಡಕದ ವಿಚಾರಕ್ಕೆ ಮದುವೆ ಮುರಿದುಕೊಂಡಿದ್ದಾಳೆ.
ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ತಾನು ಮದುವೆಯಾಗುತ್ತಿರುವ ಹುಡುಗನಿಗೆ ಕನ್ನಡಕವಿಲ್ಲದೇ ಓದಲು ಆಗಲ್ಲ ಎಂದು ವಧುವಿಗೆ ಗೊತ್ತಾಗಿದೆ. ಇದರಿಂದ ಆಕೆ ಮದುವೆಯನ್ನೇ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ.
ವರನ ಮನೆಯವರು ಕಣ್ಣಿನ ದೋಷವಿರುವ ವಿಚಾರವನ್ನು ಮುಚ್ಚಿಟ್ಟಿದ್ದರಂತೆ. ಆದರೆ ಮದುವೆಯ ದಿನವೂ ವರ ಕನ್ನಡಕ ಹಾಕಿಕೊಂಡು ಬಂದಾಗ ಅನುಮಾನಗೊಂಡ ವಧು ಕನ್ನಡಕ ತೆಗೆದು ಓದಲು ಹೇಳಿದ್ದಾಳೆ. ಈ ವೇಳೆ ವಿಚಾರ ಬೆಳಕಿಗೆ ಬಂದಿದೆ. ವರನಿಗೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್, ಹಣವನ್ನು ಹಿಂದಿರುಗಿಸುವಂತೆ ವಧುವಿನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.