Publish Date: Sat, 26 Oct 2019 (10:13 IST)
Updated Date: Sat, 26 Oct 2019 (10:15 IST)
ನವದೆಹಲಿ: ಅಪರಾಧ ಹಿನ್ನಲೆಯಿದ್ದರೂ, ಅಂಗವೈಕಲ್ಯವಿದ್ದರೂ, ಏನೇ ದೌರ್ಬಲ್ಯಗಳಿದ್ದರೂ ಸರಿ, ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸಿ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿವಾದಿತ ಹೇಳಿಕೆ ನೀಡಿದ್ದಾರೆ.
ಜಾರ್ಖಂಡ್ ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಿಶಿಕಾಂತ್ ದುಬೆ ಎಂತಹದ್ದೇ ಅಪರಾಧಿಯಾದರೂ ಸರಿಯೇ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸಬೇಕು. ಯಾಕೆಂದರೆ ಎಲ್ಲರೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯ ಮೇಲೆ ವಿಶ್ವಾಸವಿಡಬೇಕು ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕೇಂದ್ರ ನಾಯಕರು ಯಾವತ್ತೂ ಉತ್ತಮ ನಾಯಕರನ್ನೇ ಆಯ್ಕೆ ಮಾಡುತ್ತಾರೆಂಬ ನಂಬಿಕೆಯಿಡಬೇಕು. ಹೀಗಾಗಿ ಅವರು ಎಂತಹದ್ದೇ ಅಪರಾಧಿ ಹಿನ್ನಲೆಯುಳ್ಳ ವ್ಯಕ್ತಿಯನ್ನು ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ನಾವು ಮರು ಮಾತನಾಡದೇ ಬೆಂಬಲಿಸಬೇಕು ಎಂದಿದ್ದಾರೆ.