Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಜನ್ಮಭೂಮಿಯಲ್ಲಿ ಸಿಗುತ್ತಾ ಅಪೂರ್ವ ಕಾಣಿಕೆ?

ಯಡಿಯೂರಪ್ಪ ಜನ್ಮಭೂಮಿಯಲ್ಲಿ ಸಿಗುತ್ತಾ ಅಪೂರ್ವ ಕಾಣಿಕೆ?
ಮಂಡ್ಯ , ಶುಕ್ರವಾರ, 25 ಅಕ್ಟೋಬರ್ 2019 (17:08 IST)
ಉಪ ಚುನಾವಣೆಯ ಕಾವು ಶುರುವಾಗಿರುವಾಗಲೇ ಮಂಡ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಹವಾ ಜೋರಾಗುತ್ತಿದೆ.

ಮಂಡ್ಯದ ಶೀಳನೆರೆ ಗ್ರಾಮದಲ್ಲಿ ನಡೆದ ಅನರ್ಹ ಶಾಸಕ ನಾರಾಯಣಗೌಡರ ಅಭಿಮಾನಿಗಳ ಸಭೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಮಾಜಿಶಾಸಕ ಮಾರುತಿರಾವ್ ಪವಾರ್ ಭಾಗಿಯಾದ್ರು.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯು ಗೆಲ್ಲುವ ಮೂಲಕ   
ಮಂಡ್ಯ ಜಿಲ್ಲೆಯಲ್ಲಿ ಖಾತೆ ತೆರೆಯುವ ವಿಶ್ವಾಸ ವ್ಯಕ್ತಪಡಿಸಿದ್ರು ಪವಾರ್.
webdunia

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ
ಜನ್ಮಭೂಮಿಯ ಅಪೂರ್ವ ಕಾಣಿಕೆಯನ್ನು ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಬುದ್ಧ ಮತದಾರರು ನೀಡುತ್ತಾರೆ ಅಂತ ಭವಿಷ್ಯ ನುಡಿದ್ರು.

ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ವಿಜಯಮಾಲೆ ತೊಡಿಸಿ ಹರಸಿ, ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಮಹಿಳೆಗೆ ಆ ಥರ ಮಾಡೋದಾ?