Publish Date: Sat, 05 Nov 2022 (14:13 IST)
Updated Date: Sat, 05 Nov 2022 (11:46 IST)
ಪಾಟ್ನಾ: ಎರಡು ತಿಂಗಳ ಹಿಂದೆಯಷ್ಟೇ ಬಿಜೆಪಿಯೊಂದಿಗಿನ ಸಂಬಂಧ ಮುರಿದುಕೊಂಡು ಹೊರಬಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಡರಾಜ್ಯಗಳಿಗೆ ಕಡಿಮೆ ಕೊಡುಗೆ ನೀಡಿರುವುದಲ್ಲದೇ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದ್ದರು.
ಗುರುವಾರ ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬಡ ರಾಜ್ಯಗಳಲ್ಲಿ ಏನಾದರೂ ಪ್ರಯೋಜನಕಾರಿ ಕೆಲಸವಾಗಿದೆಯೇ? ಪ್ರಚಾರ ಮಾತ್ರ ನಡೆಯುತ್ತಿದೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದರ ಜೊತೆಗೆ, ಬಹುಕಾಲದ ಬೇಡಿಕೆಯನ್ನು “ಎಲ್ಲಾ ಬಡ ರಾಜ್ಯಗಳು ಪಡೆಯಬೇಕು ಎಂದು ಹೆಸರೇ ಹೇಳದೇ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
ಸಮಾಜದ ದುರ್ಬಲ ವರ್ಗಗಳನ್ನು, ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಮೇಲೆತ್ತಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ.