Select Your Language

Notifications

webdunia
webdunia
webdunia
webdunia

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ

Sampriya

ಪಾಟ್ನಾ , ಮಂಗಳವಾರ, 26 ಆಗಸ್ಟ್ 2025 (19:11 IST)
Photo Credit X
ಪಾಟ್ನಾ: ಒಂದು ದಿನದ ವಿರಾಮದ ನಂತರ ಸುಪೌಲ್‌ನಲ್ಲಿ ಪುನರಾರಂಭಗೊಂಡ ಬಿಹಾರದ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮಂಗಳವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಇತರರೊಂದಿಗೆ ಪ್ರಿಯಾಂಕಾ ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರಗೆ ಚಾಲನೆ ನೀಡಿದ ಸಹೋದರ-ಸಹೋದರಿ ಜೋಡಿಯನ್ನು ನೋಡಲು ನೆರೆದಿದ್ದ ಬೃಹತ್ ಜನಸಮೂಹದತ್ತ ಕೈಬೀಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, "ಜನರ ವಿಶ್ವಾಸ ಕಳೆದುಕೊಂಡಿರುವ" ಪಕ್ಷವು "ಮತ ಕಳ್ಳತನ" ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದರು. 

"ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಹೆಸರಿನಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ. ಆದರೆ ಬಡವರ ಒಂದು ಮತವನ್ನು ಕದಿಯಲು ನಾವು ಬಿಡುವುದಿಲ್ಲ" ಎಂದು ಪ್ರಿಯಾಂಕಾ ಕೇಸರಿ ದಳದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.





Share this Story:

Follow Webdunia kannada

ಮುಂದಿನ ಸುದ್ದಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ