Webdunia - Bharat's app for daily news and videos

Install App

ಕೇಳಿದ್ರೆ ಶಾಕ್ ಆಗ್ತೀರ! ಮಾಜಿ ಪ್ರಿಯತಮನ ರಿವೇಂಜ್!

Webdunia
ಗುರುವಾರ, 11 ನವೆಂಬರ್ 2021 (10:20 IST)
ಹೈದರಾಬಾದ್ : ಯುವತಿಯೊಬ್ಬಳು ಆಕೆಯ ಪ್ರಿಯಕರನಿಂದ ಬರ್ಬರವಾಗಿ ಹಲ್ಲೆಗೊಳಗಾಗಿದ್ದಾಳೆ.
ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಈ ಹಲ್ಲೆಗೆ  ಕಾರಣ ಎಂದು ಹೇಳಲಾಗಿದೆ. ಆದರೆ ಆಕೆಯ ಮೇಲೆ ಯುವಕ ಮಾಡಿದ ಹಲ್ಲೆಯ  ಭೀಕರತೆ ನಿಜಕ್ಕೂ ಶಾಕ್ ತರುವಂತಿದೆ. ಆ ವ್ಯಕ್ತಿ ಯುವತಿಗೆ ಬರೋಬ್ಬರಿ 18 ಬಾರಿ ಇರಿದಿದ್ದಾನೆ.
ಈ ಘಟನೆ ನಡೆದದ್ದು ಗ್ರೇಟರ್ ಹೈದರಾಬಾದ್ ವ್ಯಾಪ್ತಿಯ ಹಸ್ತಿನಾಪುರಂನಲ್ಲಿ. ಎಲ್ಬಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಈ ನಗರದಲ್ಲಿ ಬಾಡಿಗೆ ರೂಂನಲ್ಲಿ ಆಕೆ ವಾಸವಾಗಿದ್ದಳು.  ಯುವತಿಯ ಹೆಸರು ಶಿರೀಷಾ. ಆರೋಪಿ ಬಸವರಾಜ್. ಇವರಿಬ್ಬರೂ ವಿಕಾರಾಬಾದ್ ಜಿಲ್ಲೆಯ ದೌಲತಾಬಾದ್ ನಿವಾಸಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದಲೂ ರಿಲೇಶನ್ಶಿಪ್ನಲ್ಲಿ ಇದ್ದರು. ಆದರೆ ಎರಡು ತಿಂಗಳಿಂದ ಶಿರೀಷಾ ಬೇರೊಬ್ಬನ ಸಂಘ ಮಾಡಿದ್ದೇ ಬಸವರಾಜ್ ಕೋಪಕ್ಕೆ ಕಾರಣ. ಶಿರೀಷಾ ಇತ್ತೀಚೆಗೆ ಶ್ರೀಧರ್ ಎಂಬುವನೊಂದಿಗೆ ತುಂಬ ಕ್ಲೋಸ್ ಆಗಿದ್ದಳು. ಹೀಗಾಗಿ ಬಸವರಾಜ್ನನ್ನು ಮದುವೆಯಾಗುವುದಿಲ್ಲ ಎನ್ನುತ್ತಿದ್ದಳು. ಇದೇ ಕಾರಣಕ್ಕೆ ಕೋಪಗೊಂಡ ಬಸವರಾಜ್ ಶಿರೀಷಾಳಿಗೆ 18 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆಕೆಯೀಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

ಮುಂದಿನ ಸುದ್ದಿ
Show comments