Select Your Language

Notifications

webdunia
webdunia
webdunia
webdunia

ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಹಲ್ಲೆ

ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಹಲ್ಲೆ
ಬೆಂಗಳೂರು , ಗುರುವಾರ, 4 ನವೆಂಬರ್ 2021 (09:20 IST)
ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಬೆಂಗಳೂರಿನ ಕೆಂಪೇಗೌಡ  ವಿಮಾನ ನಿಲ್ದಾಣದಲ್ಲಿ ಹಲ್ಲೆಯಾಗಿದ್ದು, ಈ ಸಂಬಂಧ ವಿಜಯ್ ಪೊಲೀಸರಿಗೆ ದೂರು ನೀಡಿದ್ದರು.

ವಿಜಯ್ ಸೇತುಪತಿ ರಕ್ಷಕನಾಗಿದ್ದ ಜಾನ್ಸನ್ ಮೇಲೆ ಪಾನಮತ್ತನಾಗಿದ್ದ ಅಭಿಮಾನಿಯೊಬ್ಬ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜೀಸಂಧಾನ ಮಾಡಿದ ಮೇಲೆ ದೂರು ವಾಪಸ್ ಪಡೆಯಲಾಗಿದೆ.

ಶೂಟಿಂಗ್ ಗೆ ಆಗಮಿಸುತ್ತಿದ್ದಾಗ ವಿಜಯ್ ಸೇತುಪತಿ ಜೊತೆ ಸೆಲ್ಫೀ ತೆಗೆಯಲು ಪಾನಮತ್ತ ವ್ಯಕ್ತಿ ಪ್ರಯತ್ನಿಸಿದ್ದ. ಆತ ಮದ್ಯಪಾನ ಮಾಡಿದ್ದರಿಂದ ವಿಜಯ್ ಸೆಲ್ಫೀ ನಿರಾಕರಿಸಿದ್ದಾರೆ. ಈ ವೇಳೆ ಸೆಲ್ಫೀಗಾಗಿ ಆತ ಹಿಂಬಾಲಿಸಿದ್ದಕ್ಕೆ ಜಾನ್ಸನ್ ಆತನನ್ನು ತಳ್ಳಿದ್ದಾನೆ. ಬಳಿಕ ಆರೋಪಿ ಜಾನ್ಸನ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಕೌಟ್ ಮಾಡದೇ ಸಾಯಿ ಪಲ್ಲವಿ ಫಿಟ್ ಆಗಿರೋದು ಹೇಗೆ ಗೊತ್ತಾ?!