Select Your Language

Notifications

webdunia
webdunia
webdunia
webdunia

ಭಾರತ ಮಾತೆ ಬಿಜೆಪಿಯವರಿಂದ ಬಿಡಿಸಿಕೊಂಡು ಓಡುವ ಪ್ರಯತ್ನ : ವಿಶ್ವನಾಥ್

ಭಾರತ ಮಾತೆ ಬಿಜೆಪಿಯವರಿಂದ ಬಿಡಿಸಿಕೊಂಡು ಓಡುವ ಪ್ರಯತ್ನ : ವಿಶ್ವನಾಥ್
ನವದೆಹಲಿ , ಶನಿವಾರ, 11 ಮಾರ್ಚ್ 2023 (11:02 IST)
ನವದೆಹಲಿ : ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿ ರಕ್ಷಿಸುತ್ತಿದೆ. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕುತಂತ್ರದಿಂದ ಬಿಡುಗಡೆ ಮಾಡಿಸಿ, ನಾಯಕರು ಭಾರತ್ ಮಾತಾಕೀ ಜೈ ಎನ್ನುತ್ತಾರೆ.

ಇವರಿಂದ ಬಿಡಿಸಿಕೊಂಡು ಓಡಿ ಹೋಗಲು ಭಾರತ ಮಾತೆಯೇ ಪ್ರಯತ್ನಿಸುತ್ತಿದ್ದಾಳೆ ಎಂದು ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿ ರಾಹುಲ್ ಗಾಂಧಿ ಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಅನುಭವಗಳೊಂದಿಗೆ ಮಾತನಾಡುತ್ತಿದ್ದಾರೆ. ಲಂಡನ್ನಲ್ಲಿ ಮಾತನಾಡಿರುವುದು ಭಾರತದ ವಿರುದ್ಧ ಅಲ್ಲ, ಭಾರತದಲ್ಲಿರುವ ನಾಯಕತ್ವ ವಿರುದ್ಧ.

ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ಇಡಿ ದಾಳಿ ನಡೆಸುತ್ತದೆ. ದೇಶದ್ರೋಹಿ ಎನ್ನಲಾಗುತ್ತದೆ. ನಾವು ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎಂದು ಕೇಳಿದರು.

ಭ್ರಷ್ಟಾಚಾರ ಮಾಡಿದ ವ್ಯಕ್ತಿಯನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ಅಲ್ಲಿ ಭಾರತ್ ಮಾತಾಕೀ ಜೈ ಎನ್ನುತ್ತಾರೆ. ಇದನ್ನು ಕಂಡು ಭಾರತ ಮಾತೆ ಬಿಜೆಪಿಗರ ಕೈಯಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಭಾರತದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಉಗ್ರ ದಾಳಿ : ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ