Select Your Language

Notifications

webdunia
webdunia
webdunia
webdunia

ಖ್ಯಾತ ಪತ್ರಕರ್ತ ಎಸ್.ಗುರುಮೂರ್ತಿ ಮೇಲೆ ದುಷ್ಕರ್ಮಿಗಳಿಂದ ದಾಳಿ

ಖ್ಯಾತ ಪತ್ರಕರ್ತ ಎಸ್.ಗುರುಮೂರ್ತಿ ಮೇಲೆ ದುಷ್ಕರ್ಮಿಗಳಿಂದ  ದಾಳಿ
ಚೆನ್ನೈ , ಸೋಮವಾರ, 27 ಜನವರಿ 2020 (10:50 IST)
ಚೆನ್ನೈ : ಖ್ಯಾತ ಪತ್ರಕರ್ತ, ತುಘಲಕ್ ಮ್ಯಾಗಜೀನ್ ಸಂಪಾದಕ ಎಸ್.ಗುರುಮೂರ್ತಿ ಮೇಲೆ 9 ಮಂದಿ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಚೆನ್ನೈ ನಲ್ಲಿರೋ ಗುರುಮೂರ್ತಿ ನಿವಾಸದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ 9 ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ದಾಳಿಗೆ ಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿಗಳು ದುಷ್ಕರ್ಮಿಗಳ ದಾಳಿ ತಡೆದಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚೆನ್ನೈ ಪೊಲೀಸರು ತನಿಖೆ ಶುರು ಮಾಡಿದ್ದು, ಆರೋಪಿಗಳ ಪತ್ತೆಗಾಗಿ ತೀವ್ರ ತಲಾಶ್ ನಡೆಸುತ್ತಿದ್ದಾರೆ. ತುಘಲಕ್ ಮ್ಯಾಗಜೀನ್ ಸಂಪಾದಕರಾಗಿರೋ ಗುರುಮೂರ್ತಿ ಆರ್ ಎಸ್ ಎಸ್ ನಲ್ಲೂ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿದ ನಟಿ ಶೃತಿ