Webdunia - Bharat's app for daily news and videos

Install App

ಸೆಕ್ಸ್ ಮಾಡಿ ಕೈಕೊಟ್ಟಿದ್ದಕ್ಕೆ ಉಗ್ರನನ್ನು ಕೊಲ್ಲಲು ನೆರವಾದ ಪ್ರಿಯತಮೆ!

Webdunia
ಮಂಗಳವಾರ, 10 ಅಕ್ಟೋಬರ್ 2017 (09:10 IST)
ಜಮ್ಮು ಕಾಶ್ಮೀರ: ನಾರಿ ಮುನಿದರೆ ಮಾರಿ ಎನ್ನುವ ಮಾತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿದ್ದ ಉಗ್ರ ಉಮರ್ ಖಾಲಿದ್ ವಿಷಯದಲ್ಲಿ ಸತ್ಯವಾಗಿದೆ.

 
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಖಾಲಿದ್ ತನ್ನನ್ನು ಪ್ರೀತಿಸಿದ ಹುಡುಗಿಗೇ ಕೈಕೊಟ್ಟಿದ್ದ. ಹುಡುಗಿಯರ ಹುಚ್ಚನಾಗಿದ್ದ ಈತನನ್ನು ಪ್ರೀತಿಸಿ ಬಂದಿದ್ದ ಯುವತಿ ಜತೆ ಸೆಕ್ಸ್ ನಡೆಸಿ ಆಕೆ ಗರ್ಭಿಣಿ ಎಂದು ಗೊತ್ತಾದ ತಕ್ಷಣ ದೂರ ತಳ್ಳಿದ್ದ.

ನಿನ್ನ ಹೊಟ್ಟೆಯಲ್ಲಿರುವ ಕುಡಿಗೂ ನನಗೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡಿದ್ದ. ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರಿಗೂ ಗೊತ್ತಾಗದ ಹಾಗೆ ಪಂಜಾಬ್ ನ ಜಲಂಧರ್ ಗೆ ತೆರಳಿ ಗರ್ಭಪಾತ ಮಾಡಿದ್ದಳು. ನಂತರ ತನಗೆ ಮೋಸ ಮಾಡಿದ ಖಾಲಿದ್ ನನ್ನು ಕೊಲ್ಲುವುದಾಗಿ ಶಪಥ ಮಾಡಿದ್ದಳು.

ಅದರಂತೆ ಕಳೆದ ವರ್ಷ ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಕಚೇರಿಗೆ ಆಗಮಿಸಿದ ಆಕೆ ಉಮರ್ ಖಾಲಿದ್ ನನ್ನು ಕೊಲ್ಲಲು ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಳು. ಅದರಂತೆ ಉಗ್ರನ ವಾಸಸ್ಥಳ, ಚಲನವಲನಗಳ ಸಂಪೂರ್ಣ ಮಾಹಿತಿ ನೀಡಿದ್ದಳು. ನಿನ್ನೆ ಈತ ಸೋಪೋರ್ ಗೆ ಭೇಟಿ ನೀಡುತ್ತಿರುವ ವಿಚಾರವನ್ನೂ ಈಕೆಯೇ ಪೊಲೀಸರಿಗೆ ನೀಡಿದ್ದಳು. ಅದರಂತೆ ಆತನನ್ನು ಸುತ್ತುವರಿದ ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಇದರೊಂದಿಗೆ ತನ್ನ ಸೇಡು ತೀರಿಸಿಕೊಂಡಿದ್ದಲ್ಲದೆ, ದೇಶಕ್ಕೂ ಒಳ್ಳೆಯದನ್ನೇ ಮಾಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments