Webdunia - Bharat's app for daily news and videos

Install App

ಫೇಸ್‌ಬುಕ್ ಗೆಳೆತನದಿಂದ 21 ಲಕ್ಷ ರೂ.ಕಳೆದುಕೊಂಡ ವೃದ್ಧೆ

Webdunia
ಬುಧವಾರ, 22 ನವೆಂಬರ್ 2023 (12:42 IST)
ಫೇಸ್‌ಬುಕ್ ಸ್ನೇಹ, ಪ್ರೀತಿ ಕೊಲೆಯಲ್ಲಿ ಅಂತ್ಯವಾದ ಉದಾಹರಣೆಗಳಿವೆ. ಫೇಸ್‌ಬುಕ್‌ನಿಂದ ಹಣ ಕಳೆದುಕೊಂಡವರಿಗೆ ಏನೂ ಬರವಿಲ್ಲ. ಅದಕ್ಕೊಂದು ತಾಜಾ ಉದಾಹರಣೆ 76 ವರ್ಷದ ಈ ವೃದ್ಧೆ
 
ಫೇಸ್‌ಬುಕ್, ಫೇಸ್‌ಬುಕ್, ಫೇಸ್‌ಬುಕ್... ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು 100ರ ಅಂಚಿನಲ್ಲಿರುವ ವೃದ್ಧರಿಗೂ ಈ ಮಾಯೆ ಸುತ್ತಿಕೊಂಡು ಬಿಟ್ಟಿದೆ. ಈ ಲೋಕಪ್ರಿಯ ಸಾಮಾಜಿಕ ಜಾಲತಾಣ ದಿನೇ ದಿನೇ ಜನಪ್ರಿಯವಾಗುತ್ತಿದ್ದಂತೆ, ಇದರಿಂದ ಹುಟ್ಟಿಕೊಳ್ಳುತ್ತಿರುವ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. 
 
ಫೇಸ್‌ಬುಕ್ ಗೀಳು ಹತ್ತಿಸಿಕೊಂಡ ವೃದ್ಧೆಗೆ ತಾನು ಲಂಡನ್ ನಿವಾಸಿ ಎಂದು ಹೇಳಿಕೊಂಡಿರುವ ಡೇನಿಯಲ್ ಎಂಬ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ನಾನು ಭಾರತಕ್ಕೆ ಬಂದಾಗ ನಿಮ್ಮನ್ನು ಭೇಟಿಯಾಗುತ್ತೇನೆ ಎಂದೆಲ್ಲ ಆತ ಚಾಟ್ ಮಾಡಿದ್ದ. 
 
ಕಳೆದ ಆಗಸ್ಟ್ 19 ರಂದು ವೃದ್ಧೆಗೆ ಕರೆ ಮಾಡಿದ ಮಹಿಳೆಯೊಬ್ಬರು ಡೇನಿಯಲ್ ನಿಮ್ಮ  ದೂರವಾಣಿ ನಂಬರ್ ನೀಡಿದ್ದಾನೆ. ಆತ ಲಂಡನ್‌ನಿಂದ ಬರುವಾಗ ತಂದಿದ್ದ ಲಗೇಜು ಮತ್ತು 25 ಸಾವಿರ ಅಮೇರಿಕನ್ ಡಾಲರ್ ಹಣವನ್ನು ಸೀಮಾಸುಂಕದವರು  ವಶಪಡಿಸಿಕೊಂಡಿದ್ದಾರೆ ಇದನ್ನು ಬಿಡಿಸಿಕೊಳ್ಳಲು 62 ಸಾವಿರ ರೂಪಾಯಿ ಬೇಕು.  ಅಧಿಕಾರಿಗಳು  ಲಗೇಜು ಹಿಂತಿರುಗಿಸಿದ ನಂತರ ನಿಮ್ಮ ಹಣವನ್ನು ಹಿಂತಿರುಗಿಸುತ್ತೇವೆ ಎಂದು ಹೇಳಿದ್ದಾಳೆ. ಇದನ್ನು ನಂಬಿದ ವೃದ್ಧೆ ಡೇನಿಯಲ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾಳೆ. 
 
ವೃದ್ಧೆ ಸುಲಭವಾಗಿ ಮೋಸವಾಗಿದ್ದರಿಂದ ಪ್ರೇರಣೆ ಪಡೆದ ಮಹಿಳೆ ಮತ್ತೆ ಮತ್ತೆ ಹತ್ತಾರು ಬಾರಿ ಕರೆ ಮಾಡಿ ಬೇರೆ ಬೇರೆ ಖಾತೆಗಳಿಗೆ ಒಟ್ಟು  21 ಲಕ್ಷ ರೂಪಾಯಿಗಳನ್ನು ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. 
 
ತನ್ನ ಹಣದ ಜತೆ ಡೇನಿಯಲ್ ಬರುತ್ತಾನೆ ಎಂದು ಕಾದು ಕಾದು ಸುಸ್ತಾದ ವೃದ್ಧೆ ಹಣ ಹಾಕಿಸಿಕೊಂಡ ಮಹಿಳೆ ಮತ್ತು ಡೇನಿಯಲ್ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಅವೆರಡು ಸ್ವಿಚ್ಡ್ ಆಫ್ ಆಗಿದ್ದವು. ಆತನ ಫೇಸ್‌ಬುಕ್ ಖಾತೆ ಸಹ ನಾಪತ್ತೆಯಾಗಿತ್ತು.
 
ಕಷ್ಟಕಾಲಕ್ಕೆ ಬರಲಿ ಎಂದು  ಆಸ್ತಿ ಮಾರಿದ ಹಣವನ್ನು ಬ್ಯಾಂಕ್‌ನಲ್ಲಿಟ್ಟು, ಅದರಿಂದ ಬರುತ್ತಿದ್ದ ಬಡ್ಡಿಯಿಂದ ಜೀವನ ನಡೆಸುತ್ತಿದ್ದ ವೃದ್ಧೆ ತನಗಾದ ಮೋಸದಿಂದ ಕಂಗಾಲಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣನನ್ನು‌ ತೂಗಿದ ಸ್ಪೀಕರ್ ಯುಟಿ ಖಾದರ್ ಗೆ ನೆಟ್ಟಿಗರು ಹೀಗೇ ಹೇಳೋದಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮುಂದಿನ ಸುದ್ದಿ
Show comments