Select Your Language

Notifications

webdunia
webdunia
webdunia
webdunia

ಬಿಆರ್ ಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಅಲ್ಲು ಅರ್ಜುನ್ ಮಾವ

Chandrashekhar Reddy

Krishnaveni K

ಹೈದರಾಬಾದ್ , ಶನಿವಾರ, 17 ಫೆಬ್ರವರಿ 2024 (10:41 IST)
Photo Courtesy: Twitter
ಹೈದರಾಬಾದ್: ಜನಪ್ರಿಯ ನಟ ಅಲ್ಲು ಅರ್ಜುನ್ ಮಾವ ಕಾಂಚರ್ಲ ಚಂದ್ರಶೇಖರ ರೆಡ್ಡಿ ಬಿಆರ್ ಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ.

ಚಂದ್ರಶೇಖರ ರೆಡ್ಡಿ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿಯವರ ತಂದೆ. ಚಂದ್ರಶೇಖರ ರೆಡ್ಡಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಚಂದ್ರಶೇಖರ ರಾವ್ ಅವರ ಬಿಆರ್ ಎಸ್ ಪಕ್ಷದಲ್ಲಿದ್ದರು. ಆದರೆ ಇದೀಗ ಲೋಕಸಭೆ ಚುನಾವಣೆಗೆ ಮೊದಲು ತಮ್ಮ ಸಂಗಡಿಗರೊಂದಿಗೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಚಂದ್ರಶೇಖರ ರೆಡ್ಡಿ ಬಹಳ ಸಮಯದಿಂದ ಬಿಆರ್ ಎಸ್ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿತ್ತು. ಇದಾದ ಬಳಿಕ ತೆಲಂಗಾಣದಲ್ಲಿ ಕಾಂಗ್ರೆಸ್ ದಿನೇ ದಿನೇ ಬಲವರ್ಧನೆ ಮಾಡಿಕೊಳ್ಳುತ್ತಿದೆ. ಇತ್ತ ಚಂದ್ರಶೇಖರ್ ರಾವ್ ಅವರ ಕುಟುಂಬ ರಾಜಕಾರಣದಿಂದ ಬೇಸತ್ತು ಕೆಲವರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.

ಚುನಾವಣೆ ಸಮಯದಲ್ಲಿ ಎಲ್ಲಾ ಪಕ್ಷಗಳಿಂದಲೂ ನಾಯಕರು ಪಕ್ಷಾಂತರ ಮಾಡುವುದ ಸಾಮಾನ್ಯ. ಇತ್ತೀಚೆಗಷ್ಟೇ ಮಿಲಿಂದ್ ದಿಯೋರಾ ಶಿವಸೇನೆಗೆ ಸೇರ್ಪಡೆಯಾಗಿದ್ದರೆ ಅಶೋಕ್ ಚವಾನ್ ಬಿಜೆಪಿ ಪಾಳಯ ಸೇರಿಕೊಂಡಿದ್ದರು. ಚುನಾವಣೆ ಸಮಯದಲ್ಲಿ ಇನ್ನಷ್ಟು ನಾಯಕರ ಪಕ್ಷಾಂತರ ಗ್ಯಾರಂಟಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ನಲ್ಲಿ ಮೇಕೆದಾಟು ಯೋಜನೆ ಪ್ರಸ್ತಾಪ: ತಮಿಳುನಾಡು ತಗಾದೆ