Select Your Language

Notifications

webdunia
webdunia
webdunia
webdunia

‘ಮೋದಿ ಸರ್ಕಾರವನ್ನು ಹೊರದಬ್ಬದಿದ್ರೆ ಭಾರತಕ್ಕೆ ಅಪಾಯ ಖಂಡಿತಾ’

‘ಮೋದಿ ಸರ್ಕಾರವನ್ನು ಹೊರದಬ್ಬದಿದ್ರೆ ಭಾರತಕ್ಕೆ ಅಪಾಯ ಖಂಡಿತಾ’
ನವದೆಹಲಿ , ಸೋಮವಾರ, 5 ಫೆಬ್ರವರಿ 2018 (09:09 IST)
ನವದೆಹಲಿ: ಮೋದಿ ಸರ್ಕಾರವನ್ನು ಹೊರದಬ್ಬದಿದ್ದರೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಅಪಾಯ ಖಂಡಿತಾ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
 

ಬಿಜೆಪಿ ಮತ್ತುಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್ ದೇಶದಲ್ಲಿ ಇವೆರಡೂ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಶೀಘ್ರದಲ್ಲೇ ಮೋದಿ ಸರ್ಕಾರವನ್ನು ಕೆಳಗಿಳಿಸದಿದ್ದರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ.

‘ಎಲ್ಲರ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ಜನರನ್ನು ಮೂರ್ಖರಾಗಿಸುತ್ತಾ ಈ ಸರ್ಕಾರ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ಮೇಲೆ ಕೋಮುವಾದ ರಾಜಕಾರಣ ಮಾಡುತ್ತಾ ದೇಶದ ಸಮಸ್ಯೆಗಳನ್ನೇ ಮರೆಯಿತು’ ಎಂದು ಸಮಾಜವಾದಿ ಪಕ್ಷದ ಮುಖಂಡ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಮಾತನಾಡಲು ಬರದ ಕಾಡುಪಾಪ ರಮ್ಯಾ- ಜಗ್ಗೇಶ್ ಕಿಡಿ