Select Your Language

Notifications

webdunia
webdunia
webdunia
webdunia

ಸಿಕ್ಕಿಬಿದ್ದ ಕಳ್ಳನಿಗೆ ತನ್ನ ಕೈಯಾರೆ ಪುಳಿಯೋಗರೆ ತಿನ್ನಿಸಿದ ಯುವಕ

ಸಿಕ್ಕಿಬಿದ್ದ ಕಳ್ಳನಿಗೆ ತನ್ನ ಕೈಯಾರೆ ಪುಳಿಯೋಗರೆ ತಿನ್ನಿಸಿದ ಯುವಕ

Sampriya

ತೆಲಂಗಾಣ , ಗುರುವಾರ, 19 ಸೆಪ್ಟಂಬರ್ 2024 (17:16 IST)
Photo Courtesy X
ತೆಲಂಗಾಣ: ಕಳ್ಳತನ ವೇಳೆ ಸಿಕ್ಕಾ ಬಿದ್ದವನಿಗೆ ಯುವಕನೊಬ್ಬ ತಾನೇ ಊಟ ಮಾಡಿಸಿ, ಆತನ ಹಸಿವು ನೀಗಿಸಿ ಮಾನವೀಯತೆ ಮೆರೆದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಇಲ್ಲಿನ ಕುಖ್ಯಾತ ಕಳ್ಳ ಫೋಗಲ್ ಗಣೇಶ್  ಕಳ್ಳತನ ಮಾಡುವಾಗ ಯುವಕರ ಕೈಗೆ ಸಿಕ್ಕಿಬಿದ್ದಾನೆ. ಅಲ್ಲೇ ಇದ್ದ ಯುವಕರು ಆತನಿಗೆ ಥಳಿಸಿ, ಕಂಬಕ್ಕೆ ಕಟ್ಟಿಹಾಕಿದ್ದಾರೆ.  ಈ ವೇಳೆ ಕಳ್ಳ ಗಣೇಶ್ ತನಗೆ ಹಸಿವಾಗುತ್ತಿದೆ ಎಂದು ಯುವಕರ ಬಳಿ ಹೇಳಿದ್ದಾನೆ.  

ಮಾನವೀಯತೆ ದೃಷ್ಟಿಯಿಂದ ಕಂಬಕ್ಕೆ ಕಟ್ಟಿ ಹಾಕಿದ ಗಣೇಶ್‌ಗೆ ಯುವಕನೊಬ್ಬ ಪುಳಿಯೋಗರೆ ತಿನ್ನಿಸಿ ಮಾನವೀಯತೆ ಮೆರೆದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ಘಟನೆ ತೆಲಂಗಾಣದ ಎಲ್ಲರೆಡ್ಡಿಗುಡೆಂ ಗ್ರಾಮದಲ್ಲಿ ನಡೆದಿದ್ದು, ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಕಳ್ಳನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೂ ಸರ್ಕಾರ ಕೇರ್ ಮಾಡಲ್ಲ