Select Your Language

Notifications

webdunia
webdunia
webdunia
webdunia

ರಕ್ತದಲ್ಲಿ ಬರೆದಿತ್ತು ಆ ಒಂದು ವಾಕ್ಯ!?

ರಕ್ತದಲ್ಲಿ ಬರೆದಿತ್ತು ಆ ಒಂದು ವಾಕ್ಯ!?
ಲಕ್ನೋ , ಮಂಗಳವಾರ, 12 ಏಪ್ರಿಲ್ 2022 (10:34 IST)
ಲಕ್ನೋ : ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಯುವಕರ ಚೇಷ್ಟೆಯಿಂದ ಬೇಸತ್ತ ಇಂಟರ್ ಮೀಡಿಯೇಟ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾರ್ಥಿನಿಯ ಶವದ ಬಳಿ ಎರಡು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿದೆ. ಇದರಲ್ಲಿ ಬಾಲಕಿ ಯುವಕನ ಹೆಸರನ್ನೂ ಬಹಿರಂಗಪಡಿಸಿದ್ದಾಳೆ. ಯುವಕನ ಚೇಷ್ಟೆ ಹಾಗೂ ಬ್ಲಾಕ್ಮೇಲಿಂಗ್ನಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಪ್ರಕರಣದಲ್ಲಿ ಆತ್ಮಹತ್ಯೆ ಪತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಬಂದಾ ಜಿಲ್ಲೆಯ ದೇಹತ್ ಕೊಟ್ವಾಲಿ ವ್ಯಾಪ್ತಿಯ ಕರ್ಬೈ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾಮಪ್ರಸಾದ್ ಮಗಳು 19 ವರ್ಷದ ರೋಶನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಗ್ರಾಮದ ಇಂಟರ್ ಕಾಲೇಜಿನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಕೋಣೆಗೆ ಬೀಗ ಜಡಿದು ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾಳೆ.

ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ವಿಚಾರವನ್ನು ವಿದ್ಯಾರ್ಥಿನಿ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ರೋಶನಿ ಯುವಕನ ಕೃತ್ಯವನ್ನು ಸಹಿಸುತ್ತಲೇ ಬಂದಳು, ಮನೆಯವರಿಗೂ ಈ ಬಗ್ಗೆ ತಿಳಿಸಲಿಲ್ಲ. ಆದರೆ, ಅದೇಗೋ ಮನೆಯವರಿಗೆ ತಿಳಿದಿದ್ದು, ಇದೆಲ್ಲವನ್ನೂ ಬಿಡುವಂತೆ ಮನೆಯವರು ಹೇಳಿದ್ದರು. ಆದರೆ, ಯುವಕ ಒಪ್ಪಲಿಲ್ಲ. ಮೃತನ ಸಹೋದರ ಕೂಡ ಈ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ರೂಪಾಂತರಿ ಮಾರಣಾಂತಿಕವಲ್ಲ!