Publish Date: Fri, 08 Apr 2022 (09:26 IST)
Updated Date: Fri, 08 Apr 2022 (09:38 IST)
ಜೈಪುರ: ಮಗನ ಕಿರುಕುಳದಿಂದ ಬೇಸತ್ತು 72 ವರ್ಷದ ತಂದೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗ ಆಸ್ತಿ, ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ಇದಕ್ಕಾಗಿ ಪ್ರತಿನಿತ್ಯ ಪೀಡಿಸುತ್ತಿದ್ದ. ಆತನಂತಹ ಮಗ ಇನ್ನು ಯಾರಿಗೂ ಬೇಡ ಎಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇನ್ನು, ತಮ್ಮ ಅಂತ್ಯಕ್ರಿಯೆಯನ್ನೂ ಮಗ ಮಾಡುವುದು ಬೇಡ, ಮೊಮ್ಮಗ ಮಾಡಲಿ. ಸೊಸೆ ಮಗನ ಜೊತೆ ನೇರವಾಗಿ ಕಿರುಕುಳ ನೀಡುತ್ತಿರಲಿಲ್ಲ. ಒಂದು ವೇಳೆ ಆಕೆ ಮುಂದೆ ಅತ್ತೆಯನ್ನು ಚೆನ್ನಾಗಿ ನೋಡಿಕೊಂಡು ಹೋದರೆ ಒಳ್ಳೆಯದು. ಇಲ್ಲದೇ ಹೋದರೆ ಆಕೆಗೂ ಒಳ್ಳೆಯದಾಗಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.